ನಾಪೋಕ್ಲು (www.vknews.in) : ನಾಪೋಕ್ಲು ಬಳಿಯ ಚೆರಿಯಪರಂಬು ಜನರಲ್ ಕೆ ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಹೊದವಾಡ ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ವಿರಾಜಪೇಟೆಯ ಬ್ಲ್ಯಾಕ್ ಕೋಬ್ರಾ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತು.
ಭಾನುವಾರ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ಕೆವೈಸಿಸಿ ಕಡಂಗ ತಂಡವನ್ನು ಮಣಿಸಿ, ವಿರಾಜಪೇಟೆಯ ಬ್ಲ್ಯಾಕ್ ಕೋಬ್ರಾ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೆವೈಸಿಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ತೃತೀಯ ಸ್ಥಾನಕ್ಕೆ ನಡೆದ ಪಂದ್ಯಾಟದಲ್ಲಿ ಹ್ಯಾಶಸ್ ಗೋಣಿಕೊಪ್ಪ ತಂಡವನ್ನು ಮಣಿಸಿದ ಫ್ರೀಡಂ ಬಾಯ್ಸ್ ಹುಂಡಿ ತಂಡ ಬಹುಮಾನ ಪಡೆದುಕೊಂಡಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಬ್ಲ್ಯಾಕ್ ಕೋಬ್ರಾ ತಂಡದ ನಾಸಿರ್ ಪಡೆದುಕೊಂಡರೆ,ಸರಣಿ ಪುರುಷೋತ್ತಮ ಪ್ರಶಸ್ತಿಗೆ ಕಡಂಗ ಕೆವೈಸಿಸಿ ತಂಡದ ಅಸ್ಕರ್ ಭಾಜನರಾದರು.
ಓಯಸಿಸ್ ಕ್ಲಬ್ ಅಧ್ಯಕ್ಷ ಶಾಫಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ವಿವಿಧ ಕ್ರೀಡೆಯನ್ನು ಆಯೋಜಿಸುವುದರಿಂದ ಕ್ರೀಡೆಯು ಎಲ್ಲರ ಸಂಸ್ಕೃತಿಯ ಅಂಗವಾಗುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲೆಯಲ್ಲಿ ಸಮರ್ಪಕ ಕ್ರೀಡಾ ಸೌಲಭ್ಯಗಳ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಗ್ರಾಮೀಣ ಮಟ್ಟದಲ್ಲಿ ಉತ್ತಮ ಕ್ರೀಡಾಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಮತೊಬ್ಬ ಅತಿಥಿ ಕಾಂಗ್ರೆಸ್ ಯುವನಾಯಕ ಡಾ.ಮಂತರ್ ಗೌಡ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಭಾಗವಹಿಸುವುದು ಮುಖ್ಯ,ಕ್ರೀಡೆಯಿಂದ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಲು ಸಾಧ್ಯ ಎಂದರು. ಕ್ರೀಡೆಯಲ್ಲಿ ಗೆಲುವಿನೊಂದಿಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದ ಅವರು ಗ್ರಾಮೀಣಮಟ್ಟದ ಕ್ರೀಡಾಪಟುಗಳು ಸರ್ಕಾರದ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದು, ಪ್ರತಿಭೆಗಳನ್ನು ಗುರುತಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಮುಸ್ಲಿಂಕಪ್ ಸ್ಥಾಪಕರಾದ ರಶೀದ್ ಎಡಪಾಲ ಮಾತನಾಡಿ ಮುಸ್ಲಿಂ ಜನಾಂಗದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಇದರಿಂದ ಆಟಗಾರರಿಗೆ ಭವಿಷ್ಯದಲ್ಲಿ ಉತ್ತಮ ವೇದಿಕೆ ದೊರೆತಂತಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾಲಕ್ಕು ವಿಕಲಚೇತನರಿಗೆ ವೀಲ್ ಚೇರ್ ನೀಡಲಾಯಿತು ಮತ್ತು ರಕ್ತದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಒಂದು ವಾರಗಳಿಂದ ನಡೆದ ಪಂದ್ಯಾವಳಿಯಲ್ಲಿ ಕೊಡಗಿನ ಸುಮಾರು 114 ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಅಂಬಟ್ಟಿಯ ಆಶಿಕ್,ಫಾರೂಕ್,ಕುಂಜಿಲದ ಶಫೀಕ್ ಮತ್ತು ಹೊದವಾಡದ ಶುಹೈಲ್ ನೀಡಿದರು. ತೀರ್ಪುಗಾರರಾಗಿ ಮಡಿಕೇರಿಯ ಅನೀಫ್ ಮತ್ತು ಕುಟ್ಟದ ಮಹಮ್ಮದ್ ರಾಫಿ ಕಾರ್ಯನಿರ್ವಹಿಸಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ,ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹಿಸಿಸ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜೆಡಿಎಸ್ ಮುಖಂಡ ಮನ್ಸೂರ್ ಆಲಿ, ಪ್ರಮುಖರಾದ ಯಾಕೂಬ್,.ಆರ್ ಟಿಐ ಕಾರ್ಯಕರ್ತ ಹಾರಿಸ್, ಸಿ. ಎ.ನಾಸಿರ್, ಕ್ಲಬ್ ,ಕಾರ್ಯದರ್ಶಿ ಶಿಹಾಬುದ್ದೀನ್, ಅಶ್ರಫ್ ತಕ್ಕಪಳ್ಳಿ, ರೆಹಮಾನ್, ಸುಹೈಲ್,ಪ್ರಮುಖರಾದ ರಜಾಕ್ ಎಡಪಾಲ, ಹಾರಿಸ್ ಲಾರ ಮಡಿಕೇರಿ, ಮುಜೀಬ್ ಮೂರ್ನಾಡ್, ನಿರ್ಮಲ್ ಫುಡ್ ಪ್ರಾಡಕ್ಟ್ ಎಂಡಿ ಮಧು, ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ತಂಡಗಳ ನಾಯಕರು,ಸದಸ್ಯರು ಮತ್ತಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.