ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಗ್ಲಾಕೋಮ ಕಾಚಬಿಂದು (ದೃಷ್ಟಿ ಚೋರ) ಪಂಚೇಂದ್ರಿಗಳಲ್ಲಿ ಕಣ್ಣುಗಳು ಅತಿ ಮಹತ್ವದ ಪಾತ್ರವಹಿಸುತ್ತದೆ ಆದರೆ ಬಹುತೇಕ ಜನರಲ್ಲಿ ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿ ಇರುವುದಿಲ್ಲ ಹೀಗಾಗಿ ನಮ್ಮ ದೇಶದಲ್ಲಿ 20 ಕೋಟಿಗಿಂತಲೂ ಹೆಚ್ಚು ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ.
ಕಣ್ಣು ಅತ್ಯಂತ ಮಹತ್ವದ ಅಂಗ ಕಣ್ಣಿನ ರೋಗಗಳನ್ನು ತಡೆಗಟ್ಟುವುದು ಮತ್ತು ದೃಷ್ಟಿಯ ಉಪಯೋಗ ಸರಿಯಾಗಿ ಮಾಡಿಕೊಳ್ಳುವುದು ಅತಿ ಮುಖ್ಯ. ಸಾಮಾನ್ಯವಾದ ಕಣ್ಣಿನ ರೋಗಗಳೆಂದರೆ ಕಣ್ಣಿನ ಅಂಟು ರೋಗಗಳು, ಬಿಳಿ ಕಾಮಿಣಿ, ವಾಯುಗಣ್ಣು, ಮೋತಿ ಬಿಂದು, ಗಾಜು ಬಿಂದು ಅಥವಾ ಗ್ಲಾಕೋಮಾ.
ಗ್ಲಾಕೋಮ ಇದೊಂದು ಕಣ್ಣಿನ ಮೇಲೆ ಒತ್ತಡ ಹಾಕುವ ಕಾಯಿಲೆ ಕಣ್ಣಿನ ವಿವಿಧ ಭಾಗಗಳು ಯೋಗ್ಯರೀತಿಯಿಂದ ಕೆಲಸ ಮಾಡಲು ಕಣ್ಣುಗಳಲ್ಲಿ ಒಂದು ವಿಶಿಷ್ಟ ಒತ್ತಡ ಇರುತ್ತದೆ ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಇಂಟ್ರಾ ಆಕ್ಯುಲರ್ ಪ್ರೆಶರ್ ಎಂದು ಕರೆಯಲಾಗುತ್ತದೆ.
ಈ ಒತ್ತಡ ಕಣ್ಣಿನ ಮುಂಭಾಗದ ಕೋಣೆಯಲ್ಲಿ ಇರುವ ಜಲರಸ ಅದರ ನಿರ್ಮಾಣ ಮತ್ತು ಚಲನವಲನದ ಮೇಲೆ ಅವಲಂಬಿಸಿರುತ್ತದೆ. ಕಣ್ಣಿನ ಒತ್ತಡ ಹೆಚ್ಚಾಗಿ ಕಣ್ಣಿನ ಕೆಲಸದ ಮೇಲೆ ಪರಿಣಾಮವನ್ನುಂಟು ಮಾಡುವುದಕ್ಕೆ ಗಾಜು ಬಿಂದು ಅಥವಾ ಗ್ಲಾಕೋಮಾ ರೋಗ ಎಂದು ಕರೆಯುತ್ತಾರೆ.
ಈ ರೋಗದಲ್ಲಿ ಕಣ್ಣಿನ ಒತ್ತಡ ಹೆಚ್ಚಾದಂತೆ ಕಣ್ಣಿನ ನರ ಕ್ರಮೇಣ ನಾಶವಾಗುತ್ತದೆ. ಮತ್ತು ರೋಗಿಯು ಸಂಪೂರ್ಣ ಅಂದತ್ವಕ್ಕೆ ಬಲಿಯಾಗುತ್ತಾನೆ. ಒಮ್ಮೆ ನಾಶವಾದ ನರ ಯಾವ ಪ್ರಯತ್ನದಿಂದಲೂ ಕೂಡ ಮೊದಲಿನಂತೆ ಆಗುವುದಿಲ್ಲ.. ಈ ರೋಗದಲ್ಲಿ ಕಳೆದುಕೊಂಡ ದೃಷ್ಟಿ ತಿರುಗಿ ಬರಲು ಸಾಧ್ಯವಿಲ್ಲ.
ಈ ರೋಗದ ಚಿಹ್ನೆಗಳು ಬಹಳಷ್ಟು ಮಟ್ಟಿಗೆ ಮೋತಿ ಬಿಂದು ರೋಗದ ಚಿಹ್ನೆಯಂತೆ ಇರುತ್ತದೆ. ಸಾಮಾನ್ಯವಾಗಿ ಈ ರೋಗ ಗ್ಲಾಕೋಮಾ ದಿಂದ ಬಳಲುತ್ತಿರುವ ರಕ್ತ ಸಂಬಂದಿಗಳಲ್ಲಿ , 40 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ, ಸಕ್ಕರೆ ಕಾಯಿಲೆ ಹಾಗೂ ಹೃದಯದ ತೊಂದರೆ ಇರುವವರಲ್ಲಿ, ಕಣ್ಣಿಗೆ ಪೆಟ್ಟಾದವರಲ್ಲಿ, ಬಹಳ ದಿನಗಳಿಂದ ಸ್ಟಿರಾಯ್ಡ್ ಔಷಧಿಗಳ ಸೇವನೆ ಮಾಡುವವರಲ್ಲಿ ಈ ರೋಗವು ಕಾಣಿಸಿಕೊಳ್ಳಬಹುದು.
ಗ್ಲಾಕೋಮಾವನ್ನು ದೃಷ್ಟಿಯ ಚೋರ ಎಂದು ಕರೆಯುತ್ತಾರೆ.ಇದರ ಯಾವುದೇ ಗುಣಲಕ್ಷಣಗಳು ತಿಳಿಯುವುದಿಲ್ಲ, ಕೆಲವರಲ್ಲಿ ಮಾತ್ರ ಬೆಳಕಿನ ಸುತ್ತಲೂ ಕಾಮನಬಿಲ್ಲು ಕಾಣುವುದು, ದೃಷ್ಟಿದೋಷ ,ತಲೆನೋವು, ಕಣ್ಣು ಬೇನೆ, ಕೆಂಪಾದ ಕಣ್ಣು ಈ ಮುಂತಾದ ಲಕ್ಷಣಗಳು ಕಂಡುಬರುತ್ತದೆ.
ಗ್ಲಾಕೋಮಾವನ್ನು ನಿಯಂತ್ರಿಸಬಹುದು ನಲ್ವತ್ತು ಅಥವಾ 50 ವರ್ಷ ವಯಸ್ಸಾದ ನಂತರ ಪ್ರತಿಯೊಬ್ಬರೂ ದೃಷ್ಟಿ ದೋಷದ ಪ್ರಾರಂಭದಿಂದಲೇ ವೈದ್ಯರ ಸಲಹೆ ಪಡೆಯಬೇಕು. ಕನ್ನಡಕಗಳನ್ನು ವೈದ್ಯರ ಸಲಹೆ ಇಲ್ಲದೆ ಕೊಂಡುಕೊಳ್ಳಬಾರದು, ವೈದ್ಯರ ಸಲಹೆ ಪ್ರಕಾರ ಗಾಜು ಬಿಂದು ರೋಗಕ್ಕೆ ಔಷಧ ಅಥವಾ ಶಸ್ತ್ರಚಿಕಿತ್ಸೆಯ ಉಪಚಾರ ಮಾಡಿಸಬೇಕು.
ಆಗಾಗ ವೈದ್ಯರ ಬಳಿ ಕಣ್ಣು ತಪಾಸಣೆ ಮಾಡಿಸಬೇಕು, ಮುಖ್ಯವಾಗಿ ಪಾಲಿಸಬೇಕಾದ ಅಂಶಗಳೆಂದರೆ ಈ ರೋಗ ಬಂದಿದೆ ಅಂದಾಗ ತಪ್ಪದೇ ಔಷಧಪಪಾಚಾರ ಇಲ್ಲವೇ ಶಸ್ತ್ರಚಿಕಿತ್ಸೆಗೆ ಒಳಪಡುವುದು, ಕಣ್ಣಿನ ಸ್ವಚ್ಛತೆ, ಗಾಯಗಳಿಂದ ಕಣ್ಣಿನ ರಕ್ಷಣೆ, ಪೌಷ್ಟಿಕ ಆಹಾರದ ಸೇವನೆ ಮುಂತಾದ ಕ್ರಮಗಳಿಂದ ಗ್ಲಾಕೋಮ ಎಂಬ ದೃಷ್ಟಿ ಚೋರನನ್ನು ನಿಯಂತ್ರಿಸಬಹುದು.
ಡಾ. ಜ್ಞಾನೇಶ್ವರ ಪ್ರಸನ್ನನೇತ್ರ ತಜ್ಞರು, ಗ್ಲೋಬ್ ಐ ಫೌಂಡೇಶನ್ ಕಣ್ಣಿನ ಆಸ್ಪತ್ರೆ, ಹೊಸಕೋಟೆ , ಬೆಂಗಳೂರು.
ಗ್ಲಾಕೋಮಾ ಅಥವಾ ಕಾಚಬಿಂದು 1. ಗ್ಲಾಕೋಮಾ ಎಂದರೇನು? ಕಣ್ಣಿನ ನರವ್ಯೂಹ (Optic nerve Head) ಹೆಚ್ಚಾದರೆ ಕಣ್ಣಿನ ಒತ್ತಡದಿಂದ ಅಥವಾ ಕ್ಷೀಣಿಸಿದ ರಕ್ತ ಸಂಚಲನದಿಂದ ವ್ಯಾಧಿಗೆ ಒಳಪಟ್ಟು ದೃಷ್ಟಿ ವರ್ತೂಲದಲ್ಲಿ ಅಂದತ್ವ ಆವರಿಸುವುದಕ್ಕೆ ಗ್ಲಾಕೋಮಾ ಎನ್ನುತ್ತಾರೆ.
2.ಗ್ಲಾಕೋಮಾ ಯಾರಿಗೆ ಉಂಟಾಗುತ್ತದೆ? ಗ್ಲಾಕೋಮಾದಿಂದ ಬಳಲುತ್ತಿರುವ ರಕ್ತ ಸಂಬಂದಿಗಳಲ್ಲಿ 40 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ, ಸಕ್ಕರೆ ಕಾಯಿಲೆ ಹಾಗೂ ಹೃದಯದ ತೊಂದರೆ ಇರುವವರಲ್ಲಿ.ಕಣ್ಣಿನ ಪೆಟ್ಟಿನಿಂದ ಬಹುದಿನಗಳ ಕಾಲ ಸ್ಟಿರಾಯ್ಡ ಔಷಧ ಸೇವನೆಯಿಂದ ಗ್ಲಾಕೋಮಾ ಉಂಟಾಗುತ್ತದೆ. 3. ಗ್ಲಾಕೋಮಾ ಗುಣ ಲಕ್ಷಣಗಳೇನು? ಗ್ಲುಕೋಮ ದೃಷ್ಟಿ ಚೋರ ಯಾವುದೇ ಗುಣಲಕ್ಷಣಗಳು ತಿಳಿಯುವುದಿಲ್ಲ ಕೆಲವರಲ್ಲಿ ಮಾತ್ರ ಬೆಳಕಿನ ಸುತ್ತಲೂ ಕಾಮನಬಿಲ್ಲು ಕಾಣಿಸುವುದು, ದೃಷ್ಟಿ ದೋಷ ,ತಲೆನೋವು, ಕಣ್ಣುಬೇನೆ ಹಾಗೂ ಕೆಂಪಾದ ಕಣ್ಣುಗಳು ಇರಬಹುದು.
4.ಗ್ಲಾಕೋಮಾವನ್ನು ಹೇಗೆ ಕಂಡು ಹಿಡಿಯುವುದು? ನೇತ್ರ ತಜ್ಞರಿಂದ ಸಂಪೂರ್ಣ ಕಣ್ಣಿನ ತಪಾಸಣೆ, ಕಣ್ಣಿನ ಒತ್ತಡ ಪರೀಕ್ಷೆ, ನರವ್ಯೂಹ ತಪಾಸಣೆ ಹಾಗೂ ದೃಷ್ಟಿ ವರ್ತುಲದ ಪರೀಕ್ಷೆಯಿಂದ ಕಂಡು ಹಿಡಿಯಬಹುದು.
5.ಗ್ಲಾಕೋಮಾದ ಚಿಕಿತ್ಸೆ ಏನು? ಗ್ಲಾಕೋಮಾದಿಂದ ಸಂಪೂರ್ಣ ಗುಣಮುಖರಾಗುವುದು ಅಸಾಧ್ಯ, ಆದರೆ ಅದನ್ನು ನಿಯಂತ್ರಿಸಬಹುದು, ಚಿಕಿತ್ಸೆಯಲ್ಲಿ ಕಣ್ಣಿನ ಒತ್ತಡ ಕಡಿಮೆ ಮಾಡುವ ಔಷಧಿಗಳು, ಲೇಸರ್ ಚಿಕಿತ್ಸೆ ಅಥವಾ ಅಗತ್ಯಬಿದ್ದರೆ ಶಸ್ತ್ರ ಚಿಕಿತ್ಸೆಯ ಮೂಲಕ ಗ್ಲಾಕೋಮಾವನ್ನು ನಿಯಂತ್ರಿಸಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.