(www.vknews.in) ; ದೆಹಲಿಯಲ್ಲಿ ನಡೆದ ೭೫ನೇ ವರ್ಷದ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ. C.M. ನಾಗರಾಜು ಅವರ ನೇತೃತ್ವಾದಲ್ಲಿ ಮತ್ತು ಅವರ ಕಾರ್ಯಕಾರಿ ಸಮಿತಿಯ ಶಿಸ್ತುಬದ್ಧ ತಯಾರಿಯಲ್ಲಿ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ 26 ಮತ್ತು 27 ಫೆಬ್ರವರಿ’ 2023 ರಂದು ಅದ್ದೊರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಗಲ್ಫ್ ಹಾಗು ಅಮೇರಿಕಾ ರಾಷ್ಟ್ರದ ಕನ್ನಡ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಕನ್ನಡ ಪರ ಪ್ರೇಮ, ಅಭಿಮಾನವನ್ನು ಮೆರೆದಿರುತ್ತಾರೆ.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗು ಆಕರ್ಷಣೆ ಎಂದರೆ ನಮ್ಮೆಲ್ಲರ ನೆಚ್ಚಿನ ವಿಶ್ವ ನಾಯಕ ಹಾಗು ನೆಚ್ಚಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷಣ. ಸನ್ಮಾನ್ಯ ಶ್ರೀ.ನರೇಂದ್ರ ಮೋದಿ ಅವರನ್ನು ಎಲ್ಲಾ ಗಣ್ಯರೊಂದಿಗೆ ನೂರಾರು ಸಂಖ್ಯೆಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ವೇಷ ಭೂಷಣದಾರಿಗಳು, ಪೂರ್ಣ ಕುಂಭಗಳನ್ನು ಹೊತ್ತ ವನಿತೆಯರು, ಚಂಡೆ, ತಾಳ, ಮದ್ಧಾಳೆ, ಒಟ್ಟೊಳಗಳ ಮೂಲಕ ಸುಮಾರು 300 ಮೀಟರ್ ಕೆಂಪು ರತ್ನ ಕಂಬಳಿಯ ಹಾದಿಯಲ್ಲಿ ಪುಷ್ಪ ಸಿಂಚನದ ಮೂಲಕ ವೇಧಿಕೆಗೆ ಕರೆತರಲಾಯಿತು.
ಇದು ನಾವೆಲ್ಲರೂ ಕಂಡಂತಹ ಅತ್ಯಂತ ವಿಜೃಂಭಣೆಯ ಸ್ವಾಗತವಾಗಿತ್ತು ಮತ್ತು ನಮ್ಮ ನೆಚ್ಚಿನ ನಾಯಕ ಶ್ರೀ. ನರೇಂದ್ರ ಮೋದಿ ಅವರಿಗೆ ಕೊಟ್ಟಂತಹ ಕೋಟ್ಯಂತರ ಕನ್ನಡಿಗರ ಗೌರವವಾಗಿತ್ತು ಎಂಬುದನ್ನು ಹೆಮ್ಮೆಯಿಂದ ಹೇಳಬಹುದು. ಶ್ರೀ. ನರೇಂದ್ರ ಮೋದಿ ಅವರು ” ಎಲ್ಲಾದರೂ ಇರು ಎಂತಾದರು ಇರು ಏನೆಂದಿಗೂ ನೀ ಕನ್ನಡವಾಗಿರು” ಎಂದು ಕನ್ನಡದಲ್ಲಿ ಭಾಷಣ ಮಾಡಿವುದರ ಮೂಲಕ ಎಲ್ಲಾ ಕನ್ನಡಿಗರನ್ನು ಚಕಿತಗೊಳಿಸಿದರು. ಸತತ ೩೦ ನಿಮಿಷಗಳ ರೋಮಾಂಚಕ ಭಾಷಣದಲ್ಲಿ ನಮ್ಮ ಪ್ರಧಾನಿಗಳು ಕನ್ನಡ ನಾಡು, ಭಾಷೆ, ಸಂಸ್ಕೃತಿಯ ಮಹತ್ವವನ್ನು ವಿವರಿಸುವುದರ ಮೂಲಕ ನೆರೆದ್ದಿದ್ದ ಸಾವಿರಾರು ಕನ್ನಡ ಪ್ರೇಕ್ಷಕರನ್ನು ದಿಗ್ಬ್ರಾಂತಿಗೊಳಿಸಿದರು. ಇದು ನಮ್ಮೆಲ್ಲರಿಗೂ ಹೆಮ್ಮೆ ಪಡುವ ವಿಷಯ.
ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಮುಖ್ಯವಾಗಿ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಶ್ರೀ. ಬಸವರಾಜ ಬೊಮ್ಮಾಯಿ; ಭಾರತದ ಮಾನ್ಯ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಶ್ರೀ.ಪ್ರಹ್ಲಾದ ಜೋಶಿ; ಮಾನ್ಯ ಸಂಸದರು, ಕೋಲಾರ ಕ್ಷೇತ್ರ ಶ್ರೀ. S. ಮುನಿಸ್ವಾಮಿ; ಮಾಜಿ ಸಚಿವರು, ಮಾನ್ಯ ಶಾಸಕರು ಚಿಕ್ಕಮಗಳೂರು ಕ್ಷೇತ್ರ ಶ್ರೀ. C.T. ರವಿ; ಕರ್ನಾಟಕ ಸಂಸ್ಕೃತಿ ಹಾಗು ಇಂಧನ ಸಚಿವರಾದ ಶ್ರೀ. ಸುನಿಲ್ ಕುಮಾರ್; ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ. ಶ್ರೀ. ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ. ಆದಿಚುಂಚನಗಿರಿ ಮಹಾಸಂಸ್ಥಾನ ಮಠ; ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಮಾನ್ಯ ರಾಜ್ಯಸಭಾ ಸದಸ್ಯರು ಡಾ.D . ವೀರೇಂದ್ರ ಹೆಗಡೆ; ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ. ಶ್ರೀ ಪೇಜಾವರ ಮಠ, ಉಡುಪಿ ಶ್ರೀ.ಶ್ರೀ.ಶ್ರೀ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ವೇದಿಕೆಯ ಉಪಸ್ಥಿಯಲ್ಲಿ ನೆರವೇರಿತು.
ಎಲ್ಲಾ ಗಣ್ಯರು ಈ ಕಾರ್ಯಕ್ರಮವನ್ನು ತುಂಬು ಹೃದಯದಿಂದ ಶ್ಲಾಘಿಸಿದರು ಹಾಗು ಇಂತಹ ಒಂದು ಅವಿಸ್ಮರಣೀಯ ದಿನವೂ ಎಲ್ಲಾ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿಯುವುದಾಗಿ ಆಶೀರ್ವದಿಸಿದರು. ಎರಡು ದಿನಗಳು ನಡೆದ ಈ ಕಾರ್ಯಕ್ರಮವು ಕವಿಗೋಷ್ಠಿಯ ಸೊಬಗನ್ನು ನೀಡಿತು
ಇದರಲ್ಲಿ ಖ್ಯಾತ ನಿರ್ದೇಶಕ ಶ್ರೀ. T. S. ನಾಗಾಭರಣ; ಖ್ಯಾತ ಕನ್ನಡ ಕವಿ ಹಾಗು ಸಾಹಿತಿ ಗಳಾದ ಶ್ರೀ. ದೊಡ್ಡರಂಗೇಗೌಡರು ಮತ್ತು ಖ್ಯಾತ ಬರಹಗಾರ ಮತ್ತು ಕಿರುತೆರೆಯ ನಿರ್ದೇಶಕ ಶ್ರೀ. M. S. ನರಸಿಂಹಮೂರ್ತಿ ಅವರರನ್ನು ಒಳಗೊಂಡಿತ್ತು. ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು C. ಸೋಮಶೇಖರ್ ಅವರು ಉಪಸ್ಥಿತರಿದ್ದರು. ಹಾಗೆಯೇ ಕರ್ನಾಟಕದಿಂದ ಬಂದಿದ್ದ ಸಾವಿರಾರು ಕಲಾಕಾರರು ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಾಂಸ್ಕೃತಿಕ ವಿಶೇಷತೆಯ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುವುದರ ಮೂಲಕ ಕರ್ನಾಟಕದ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಏರಿಸಿದರು. ಕಾರ್ಯಕ್ರಮವು ವಿಶ್ವಖ್ಯಾತಿ ಕನ್ನಡ ಗಾಯಕ ಶ್ರೀ. ವಿಜಯ ಪ್ರಕಾಶ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮವು ಎಲ್ಲಾ ಕನ್ನಡಿಗರನ್ನು ಮನೋರಂಜಿಸಿದರು.
ನಮಗೆ ಇನ್ನೊಂದು ಹೆಮ್ಮೆಯ ಸಂಗತಿಯೇನೆಂದರೆ, ಈ ಕಾರ್ಯಕ್ರಮದಲ್ಲಿ ಗಲ್ಫ್ , ಅಮೇರಿಕಾ ರಾಷ್ಟ್ರದ ಕನ್ನಡ ಪರ ಸೇವೆ ಸಲ್ಲಿಸುತ್ತಿರುವ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಕನ್ನಡ ಪ್ರೇಮ , ಅಭಿಮಾನವನ್ನು ಮೆರೆದರು. ಕನ್ನಡಿಗರು ದುಬೈ ನ ಮತ್ತು ಕರ್ನಾಟಕ ಕ್ಲಬ್ ಕೌನ್ಸಿಲ್ ನ ಗಲ್ಫ್ ರಾಷ್ಟ್ರದ ಅಧ್ಯಕ್ಷರಾದ ಸಾದನ್ ದಾಸ್ ; ಅಮೇರಿಕಾ ಕನ್ನಡ ಒಕ್ಕೊಟಗಳ ಆಗರದ ( AKKA) ಮಾಜಿ ಅಧ್ಯಕ್ಷರು ಹಳೇಕೋಟೆ ನ್. ವಿಶ್ವಾಮಿತ್ರ ; ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರು ಮಹೇಶ್ ಗೌಡ ; ಬಹರೇನ್ ಕನ್ನಡ ಸಂಘದ ಹಾಗು ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷರು ರಾಜ್ ಕುಮಾರ್; ಮಧ್ಯ ಪ್ರಾಚ್ಯ ಲೆಕ್ಕ ಪತ್ರ ಪರಿಶೋಧಕ ಸಂಸ್ಥೆಯ ನಿರ್ದೇಶಕರಾದ ಓಮನ್ ರಾಷ್ಟ್ರದ ರಾಮಾನಂದ ಪ್ರಭು; ಕನ್ನಡಿಗರು ದುಬೈ ನ ಉಪಾಧ್ಯಕ್ಷರು ಹಾಗು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ U .A . E ಯ ಅಧ್ಯಕ್ಷರಾದ ಅರುಣ್ ಕುಮಾರ್ ಎಂ. ಕೆ ; ಕನ್ನಡಿಗರು ದುಬೈ ನ ಮಾಜಿ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತು ಕುವೈಟ್ ಕನ್ನಡ ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ ರಾವ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾದನ್ ದಾಸ್ ಅವರು, ಇಂತಹ ಒಂದು ವಿಶ್ವಮಟ್ಟದ ಕಾರ್ಯಕ್ರದಲ್ಲಿ ತಮ್ಮನ್ನು ಬರಮಾಡಿಕೊಂಡಿದ್ದಕ್ಕೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಸಿ.ಮ್. ನಾಗರಾಜು ಮತ್ತು ಎಲ್ಲಾ ಸಂಘದ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು. ಹಾಗೆ ಮಾತನಾಡುತ್ತ ಅವರು ಗಲ್ಫ್ ರಾಷ್ಟ್ರದಲ್ಲಿನ ಕನ್ನಡ ಪರ ಸೇವೆ, ಮನೆ ಮನೆಯಲ್ಲೂ ಕನ್ನಡ ಭಾಷೆ ಯ ಕಲಿಕೆ ಮತ್ತುಇನ್ನು ಹಲವು ಕನ್ನಡ ಪರ ಕಾರ್ಯಕ್ರಮಗಳ ಸಣ್ಣ ಚಿತ್ರಣವನ್ನು ನೆರೆದಿದ್ದ ಗಣ್ಯರು ಹಾಗು ಸಭಿಕರುಗಳಿಗೆ ತಿಳಿಸಿದರು. ಹಾಗೆಯೇ, ಈ ಅನಿವಾಸಿ ಕನ್ನಡ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯರನ್ನು, ,ಸಚಿವರು ಹಾಗು ಸಂಸದರನ್ನು ಭೇಟಿ ಮಾಡಿ ಅವರಿಗೂ ತಮ್ಮ ಕನ್ನಡ ಪರ ಸೇವೆಯ ಮತ್ತು ಕನ್ನಡ ಸಿನಿಮಾವನ್ನು ಗಲ್ಫ್ ಅನಿವಾಸಿ ಕನ್ನಡಿಗರಿಗೆ ತಲುಪಿಸುವ (GULF KANNADA MOVIES) ಬಗ್ಗೆಗಿನ ಕಾರ್ಯವೈಖರಿಯನ್ನು ತಿಳಿಸುವಿದರ ಮೂಲಕ ಎಲ್ಲರ ಮೆಚ್ಚಿಗೆಗೆ ಪಾತ್ರರಾದರು.
ಇದರ ಬೆನ್ನಲ್ಲೇ, ಇತ್ತೀಚೆಗಷ್ಟೇ ದುಬೈ ನಲ್ಲಿ ಉದ್ಘಾಟನೆಗೊಂಡ “ಅಂತಾರಾಷ್ಟ್ರೀಯ ಮಟ್ಟದ ಕರ್ನಾಟಕ ಇತಿಹಾಸ ದರ್ಶನ” ಉಪನ್ಯಾಸ ಸರಣಿಯ ಅನನ್ಯ ಉಪಕ್ರಮದ ಬಗ್ಗೆ ಸಚಿವರಿಗೆ ವಿವರಿಸಿ, ಅವರ ಸಂಪೂರ್ಣ ಬೆಂಬಲದ ಆಶ್ವಾಸನೆಯನ್ನು ಪಡೆದಿರುವುದು ಎಲ್ಲಾ ಕನ್ನಡಿಗರುಗಳಾದ ನಮ್ಮೇಲ್ಲರುಗು ಹೆಮ್ಮೆಯ ವಿಷಯ. ಹಾಗು ದುಬೈ, U. A. E ಯಲ್ಲಿ ” ಕನ್ನಡ ಭವನ” ನಿರ್ಮಿಸುವ ಬಗ್ಗೆ ವಿನಂತಿ ಪತ್ರವನ್ನು ಕೇಂದ್ರ ಪ್ರವಾಸಿ ಮತ್ತು ಸಾಂಸ್ಕೃತಿಕ ಸಂಸದರಿಗೆ ಕೊಡುವ ಬಗ್ಗೆ ವಿಶ್ಲೇಷಣೆ ಮಾಡಿದರು.
ವರದಿ: ಅರುಣ್ ಕುಮಾರ್ ಎಂ.ಕೆ, ದುಬೈ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.