ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಸದ್ಗುರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತದ ಆಧ್ಯಾತ್ಮಿಕ ರಾಯಭಾರಿಗಳು ಬಹುಶಃ ಭಾರತ ಈ ಹಿಂದೆ ಕಂಡಿರಯದಂತಹ, ಅಪವಿರತದಂತಹ ರೀತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು, ಯೋಗವನ್ನು ಜಗತ್ತಿಗೆ ಸಾರುತ್ತಿರುವ ಸದ್ಗುರು ಎಂಬುದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಷಯ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರದ ಮಹಾಸ್ವಾಮಿ ಹೇಳಿದರು.
ಜಿಲ್ಲೆಯ ಆವುಲಗುರ್ಕಿ ಈಶಾ ಕೇಂದ್ರದಲ್ಲಿ ಆಯೋಜಿಸಿದ ಸಪ್ತಋಷಿ ಆವಾಹನಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು ಕೊಯಂಬತ್ತೂರಿನಲ್ಲಿ ಈಶ ಫೌಂಡೇಶನ್ ಸ್ಥಾಪನೆಯಾಗಿದೆ ಅಲ್ಲಿ ಅದಿಯೋಗಿ ಮೂರ್ತಿಯೂ ಸ್ಥಾಪನೆಯಾಗಿದೆ ಪ್ರತಿ ವರ್ಷ ಮಹಾಶಿವರಾತ್ರಿ ಎಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಜಾಗರಣೆ ಮಾಡುತ್ತಾರೆ ಶಿವರಾತ್ರಿ ಏನು ಎಂಬುದು ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತಿಗೆ ಗೊತ್ತಾಗಿದ್ದು ಇಶಾ ಫೌಂಡೇಶನ್ ಧ್ಯಾನ ಯೋಗದಿಂದ ಎಂದರು.
ಭಾರತೀಯ ಪರಂಪರೆ ಸಂಪ್ರದಾಯದಂತೆ ಆದಿಯೋಗಿ ಮೂರ್ತಿ ನಾಗಮಂಟಪವನ್ನು ಪ್ರತಿಷ್ಠಾಪಿಸಲಾಗಿದೆ ಇದು ಒಂದು ಆಕರ್ಷಣೆಯ ಪ್ರವಾಸಿ ಕೇಂದ್ರ ಆಗಿಲ್ಲ ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಆತ್ಮಕ್ಕೆ ತಂಪಾಗಿಸುವ ಕೇಂದ್ರವಾಗಿದೆ ಇದು ಈ ಕೇಂದ್ರದ ಮಹತ್ವ ಎಂದು ಹೇಳಿದರು.
ವಾರಣಾಸಿಯಿಂದ ಬಂದಿರುವಂತಹ ವಿಶೇಷ ಪಂಡಿತರಿಂದ ಸಪ್ತ ಋಷಿ ನೆರವೇರುತ್ತಿದೆ ಅದು ಕಾಶಿಯಲ್ಲ ಮಾತ್ರ ನೆರವೇರಿರುವಂತದ್ದು ಅದನ್ನು ಬಿಟ್ಟರೆ ಇವತ್ತು ಇಲ್ಲಿ ನೆರವೇರಿತರಂತದ್ದು ಇಲ್ಲಿ ಸೇರಿರುವ ಎಲ್ಲರ ಸೌಭಾಗ್ಯ ಎಂದು ಭಾವಿಸಬೇಕೆಂದರು.
ಯೋಗಿ ಗಳಾಗುವಂತವರು ಬಹಳ ಜನ ಆದರೆ ಸದ್ಗುರುಗಳಿಗೆ ಕೀರ್ತಿ ಯಾಕೆ ಬರುತ್ತದೆ ಎಂದರೆ ಈ ಜಗತ್ತಿನ ಆದಿ ಯೋಗಿಯನ್ನು 21ನೇ ಶತಮಾನದಲ್ಲಿ ಮತ್ತೆ ಜಗತ್ತಿಗೆ ತಂದು ಕೊಟ್ಟವರು ಸದ್ಗುರುಗಳು ಎಂದು ಬಣ್ಣಿಸಿದರು.
ಮನುಷ್ಯ ರಾಗ ದ್ವೇಷಗಳಿಂದ ಬಿಡುಗಡೆ ಹೊಂದಾದರೆ ಸಾತ್ವಿಕ ಬದುಕನ್ನು ನಡೆಸಬೇಕು ಯೋಗದಲ್ಲಿ ತೊಡಗಿಸಿಕೊಂಡರೆ ಯಾವುದೇ ರಾಗ ದ್ವೇಷಗಳು ಕಾಮ ಕ್ರೋಧಗಳು ಗಳು ಇರಲಿಕ್ಕೆ ಸಾಧ್ಯವಿಲ್ಲ ಮನಸ್ಸು ಯಾವಾಗ ಪ್ರಫಲವಾಗಿರುತ್ತೋ ಮನುಷ್ಯನ ಸಾಧನೆಯ ಪುಟಿದೇಳುತ್ತದೆ ಎಂದರು.
ಯೋಗ ಸಾಧನೆಗಳನ್ನು ಮಾಡುವರ ಮುಖದಲ್ಲಿ ಒಂದು ಅಪೂರ್ವಾದ ಕಳೆ ಇರುತ್ತದೆ ಭಾರತೀಯರು ಯೋಗವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಅಂತ ಯೋಗ ಸಾಧನೆಯಲ್ಲಿ ಪೂಜ್ಯ ಸದ್ಗುರುಗಳು ತೊಡಗಿಸಿಕೊಂಡಿದ್ದಾರೆ ಎಂದರು.
ಈಶಾ ಫೌಂಡೇಶನ್ನ ಶ್ರೀ ಸದ್ಗುರು, ಕೊಪ್ಪಳದ ಗವಿ ಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮಿಜೀ, ಶ್ರೀ ಶಿವಶರಣ ಬಸವಮೂರ್ತಿ ಮಾದಾರ್ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜೀ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.
ವರದಿ:ತೇ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.