(www.vknews.in) ; ಕರಾವಳಿ ಐಕ್ಯತಾ ವೇದಿಕೆ (ರಿ )ಬೆಂಗಳೂರು ಇದರ ಆಶ್ರಯದಲ್ಲಿ, ನಾರಯಣ ಹೃದಯಾಲಯ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ಇಂದು ಬೆಳಿಗ್ಗೆ 10:00 ಗಂಟೆಗೆ ರಕ್ತದಾನ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪಯಾಝ್ ಸ್ವಾಗತ ಬಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಲೋಗೋ ಹಾಗೂ ಫೇಸ್ಬುಕ್ ಫೇಜ್ ಉದ್ಘಾಟನೆಯನ್ನು P.M ಅಶ್ರಫ್ ನೇರವೇರಿಸಿದರು.
P.M ಅಶ್ರಪ್ ಅವರು “ನಮ್ಮ ಈ ಸಂಸ್ಥೆಯು ಕೇವಲ ರಕ್ತದಾನಕ್ಕೆ ಮಾತ್ರ ಸೀಮಿತವಾಗದು. ಇಂದಿನ ಯುಗವು ಮಾದಕ ವ್ಯಸನಿಯಿಂದ ಕೂಡಿದ್ದು,ಅದರ ಕುರಿತು ಅಭಿಯಾನ ಪ್ರಾರಂಭಿಸಬೇಕಾಗಿದೆ ಎಂದು ಹಿತವಚನ ನೀಡಿದರು. ” ತದನಂತರ ನಾರಾಯಣ ಹೃದಾಯಲಯ ಬ್ಲಡ್ ಸೆಂಟರ್ ಮುಖ್ಯಸ್ಥರಾದ Dr.ಇಂತಿಯಾಝ್ ಅವರು “ರಕ್ತದಾನದಿಂದ ಆಗುವ ಪ್ರಯೋಜನದ ಕುರಿತು, ಇಂದು ರಕ್ತದ ಅವಶ್ಯಕತೆ ಬಹಳಷ್ಟಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕಾಗಿದೆ ಎಂದು ಹೇಳಿದರು.
” ಮುಹಮ್ಮದ್ (ವಕೀಲರು,ಬೆಂಗಳೂರು ಉಚ್ಷ ನ್ಯಾಯಾಲಯ), P.M ಅಶ್ರಫ್ (ಗುಪ್ತಚರ ಇಲಾಖೆ), ರಾಘವೇಂದ್ರ, Dr.ಇಂತಿಯಾಝ್ (ನಾರಾಯಣ ಹೃದಯಾಲಯ ಬ್ಲಡ್ ಸೆಂಟರ್ ಸಿಬ್ಬಂದಿ) ಇವರುಗಳನ್ನು ಸನ್ಮಾನಿಸಲಾಯಿತು.ಸಂಸ್ಥೆಯ ಮೊದಲನೇ ಕಾರ್ಯಕ್ರಮದಲ್ಲಿಯೇ 74 ಮಂದಿ donors ಗಳಲ್ಲಿ 69 ಮಂದಿ ಜೀವದಾನಿಗಳಾದರು. ಅಬ್ದುಲ್ ರಝಾಕ್,ಇರ್ಷಾದ್,ಅಲಿ (ಮೀಡಿಯಾ ವಿಂಗ್) ಉಪಸ್ಥಿತರಿದ್ದರು. ಕೊನೆಗೆ ನಾರಾಯಣ ಹೃದಯಾಲಯ ಬ್ಲಡ್ ಸೆಂಟರ್ 11 ಮಂದಿ ಸಿಬ್ಬಂದಿಗೆ ಹೂಗುಚ್ಷ ನೀಡುವ ಮೂಲಕ ಧನ್ಯವಾದ ತಿಳಿಸಲಾಯಿತು.
ಕರಾವಳಿ ಐಕ್ಯತಾ ವೇದಿಕೆ (ರಿ )ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.