(www.vknews.in) ; ಇರ್ಷಾದ್ B.K ಯವರ ಅಧ್ಯಕ್ಷತೆಯಲ್ಲಿ “ಪ್ರವಾಸಿ ಸಂಗಮ” ಎಂಬ ಹೆಸರಿನೊಂದಿಗೆ ಯುನೈಟೆಡ್ ವೆಲ್ಫೇರ್ ಫೌಂಡೇಶನ್ ಇದರ ವಾರ್ಷಿಕ ಮಹಾಸಭೆಯು (Jawan Oasis Resort, Safwa) ಇಸ್ತಿರಾದಲ್ಲಿ ರಾತ್ರಿ 9 ಗಂಟೆಗೆ ಸರಿಯಾಗಿ ನಡೆಯಿತು.
ಈ ಸಭೆಯಲ್ಲಿ ಮಾಸ್ಟರ್ ಮುಹಮ್ಮದ್ ಹಿಫಾಝ್ ಹಫೀಝ್ ರವರು ಖಿರಾಅತ್ ಪಾರಾಯಣ ನಡೆಸಿದರು. ಸಾದಿಖ್ NGC ರವರ ದುವಾ ನಡೆಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಹಾಗೂ ನೆರೆದಿರುವವರಿಗೆ ಸಂಘದ ಅಡ್ವೈಸರ್ ನಾಸಿರ್ ರಿಯಾದ್ ರವರು ತುಂಬು ಹೃದಯದಿಂದ ಸ್ವಾಗತಿಸಿದರು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಝುಬೈರ್ ಮತ್ತು ಊರಿನ ಉಸ್ತುವಾರಿಯಾದ ರಿಝ್ವಾನ್ ರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಝುಬೈರ್ ರವರು ಮುಖ್ಯ ಅತಿಥಿ ಬಾಷಣವನ್ನು ನಡೆಸಿದರು.
ನಂತರ ಝುಬೈರ್ ಇವರ ಸಭಾಧ್ಯಕ್ಷದ ಮೂಲಕ ಮಹಾಸಭೆಯನ್ನು ನಡೆಸಲಾಯಿತು. ಮಹಾಸಭೆಯ ಭಾಗವಾದ ವಾರ್ಷಿಕ ವರದಿಯನ್ನು ಜೊತೆ ಕಾರ್ಯದರ್ಶಿಯಾದ ಫಿರೋಝ್ ರವರು ಮಂಡಿಸಿದರು. ಅದೇ ರೀತಿ ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿಯಾದ ಸಂಶೀರ್ ರವರು ಸಭೆಯಲ್ಲಿ ವಾಚಿಸಿದರು. ಎಲ್ಲರ ಒಮ್ಮತ ಅಭಿಪ್ರಾಯದ ಮೂಲಕ ಲೆಕ್ಕಪತ್ರವನ್ನು ಉತ್ತಮ ರೀತಿಯಲ್ಲಿ ಅಂಗೀಕಾರ ಮಾಡಲಾಯಿತು.
ನಂತರ ಸಭೆಯಲ್ಲಿ ಮುಂದಿನ ಹೊಸ ಸಮಿತಿಗೆ ಕೆಲವೊಂದು ಯೋಜನೆಗಳನ್ನು ಸಿದ್ದಪಡಿಸಲಾಯಿತು.. ಯೋಜನೆಗಳನ್ನು ಮುಂದಿನ ಸಮಿತಿಗೆ ನೀಡುತ್ತಾ ಹಳೆಯ ಸಮಿತಿಯನ್ನು ಬರ್ಕಾಸ್ ಮಾಡಲಾಯಿತು. ಸಭಾಧ್ಯಕ್ಷರಾದ ಝುಬೈರ್ ರವರ ನೇತೃತ್ವದಲ್ಲಿ 15 ಮಂದಿ ಕಮಿಟಿ ಸದಸ್ಯರನ್ನೊಳಗೊಂಡ ಹೊಸ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಇರ್ಷಾದ್ B.K
ಉಪಾಧ್ಯಕ್ಷರು : ಸಲೀಂ ಖೋಬರ್ ಫಾರೂಖ್ ಜುಬೈಲ್
ಪ್ರ. ಕಾರ್ಯದರ್ಶಿ ಸಂಶೀರ್ ಅಬ್ದುಲ್ ರೆಹಮಾನ್
ಜೊತೆ ಕಾರ್ಯದರ್ಶಿ ಸಾದಿಖ್ NGC
ಕೋಶಾಧಿಕಾರಿ ರಿಝ್ವಾನ್ B.K
ದುಬೈ ಉಸ್ತುವಾರಿ ಜಾವೇದ್ ದುಬೈ
ಕಾರ್ಯಕಾರಿಣಿ ಸಮಿತಿ ಸದಸ್ಯರು: 1. ಸತ್ತಾರ್ 2. ನಾಸಿರ್ ರಿಯಾದ್ 3. ಹಫೀಝ್ 4. ಆಸಿಫ್ ಬಾವ ಖೋಬರ್ 5. ನಝರುದ್ದೀನ್ 6. ಶಾಕೀರ್ 7. ಅಲ್ತಾಫ್ 8. ನೌಫಲ್ K.M
ಹೊಸತಾಗಿ ರೂಪುಗೊಂಡ ಸಭೆಯಲ್ಲಿ ನೂತನ ಅಧ್ಯಕ್ಷರಾದ ಇರ್ಶಾದ್ B.K ರವರು ಅಧ್ಯಕ್ಷ ಭಾಷಣ ನಡೆಸಿದರು.
ಕೊನೆಯಲ್ಲಿ ಧನ್ಯವಾದ ಹಾಗೂ 3 ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಹೀಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತಿರುವೆನು.
✍️ ಸಂಶೀರ್ ಅಬ್ದುಲ್ ರೆಹಮಾನ್ (ಪ್ರ. ಕಾರ್ಯದರ್ಶಿ U.W.F 9th Block)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.