ತ್ರಿಶೂರ್ (ವಿಶ್ವ ಕನ್ನಡಿಗ ನ್ಯೂಸ್) : ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಕಾಲುವೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ. ದೇಶಮಂಗಲಂ ಕಾಳಾವರಕೋಟ್ ನಿವಾಸಿ ದಿವಂಗತ ಅಮ್ಮತ್ ಉನ್ನಿಕೃಷ್ಣನ್ ಮತ್ತು ಚಾರುಲತಾ ದಂಪತಿಯ ಪುತ್ರ ನಿದಿನ್ (26) ಮೃತಪಟ್ಟ ಯುವಕ.
ಮರುದಿನ ಯುವಕನ ಮದುವೆ ನಡೆಯಬೇಕಿದ್ದಾಗಲೇ ಸಾವು ಸಂಭವಿಸಿದೆ. ಕರಿಕೋಡಿಯಲ್ಲಿರುವ ಗೆಳೆಯನ ಮನೆಗೆ ಬಂದ ಯುವಕರ ತಂಡ ಕೊನೊಲಿ ನಾಲೆಯಲ್ಲಿ ಬೋಟಿಂಗ್ ಮುಗಿಸಿ ಸ್ನಾನಕ್ಕೆ ತೆರಳಿತ್ತು. ಆಳವಿಲ್ಲದ ಭಾಗದಲ್ಲಿ ಸ್ನಾನ ಮಾಡಲು ಇಳಿದಿದ್ದು ನಿದಿನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂರ್ಛೆ ಬಂದಿದ್ದರಿಂದ ಯುವಕ ನೀರಿಗೆ ಬಿದ್ದಿದ್ದಾನೆ ಎಂದು ಸ್ನೇಹಿತರು ಹೇಳುತ್ತಾರೆ. ಕೂಡಲೇ ಆತನನ್ನು ಒಲಾರಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಅಂತಿಕ್ಕಾಡ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.