ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ವತಿಯಿಂದ ರೂಬಿ ಜ್ಯುಬಿಲಿ ಪ್ರಯುಕ್ತ 40 ಕಾರ್ಯಕ್ರಮಗಳ ಅಂಗವಾಗಿ ಸಾರ್ವಜನಿಕ ಕುಡಿಯುವ ನೀರಿನ ಘಟಕದ ಉದ್ಘಾಟನೆಯು ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿಯಲ್ಲಿ ಜರುಗಿತು.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆಯವರು ಉದ್ಘಾಟಿಸಿದರು . ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಎಲಿಮಲೆ ಜಮಾಅತ್ ಕಮಿಟಿ ಅಧ್ಯಕ್ಷ ರಾದ ಮಹಮದ್ ಇಕ್ಬಾಲ್ ಎಲಿಮಲೆ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಈಶ್ವರಪ್ಪ ಹರ್ಲಡ್ಕ, ಜೀರ್ಮುಕ್ಕಿ ಮಸೀದಿ ಅಧ್ಯಕ್ಷ ಯೂಸುಫ್ ಪಾಣಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ವೇಣುಗೋಪಾಲ ಪುನ್ಕುಟ್ಟಿ, ಜೀರ್ಮುಕ್ಕಿ ಮಸೀದಿ ಇಮಾಂ ಅಶ್ರಫ್ ಜೌಹರಿ, ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು.
ಮೂಸಹಾಜಿ ಜೀರ್ಮುಕ್ಕಿ , ನುಸ್ರತ್ ಉಪಾಧ್ಯಕ್ಷರಾದ ಸೂಫಿ ಮುಸ್ಲಿಯಾರ್ ಹಾಗೂ ಅಬ್ದುಲ್ಲ ಜಿ.ಎಸ್. ಹಿರಿಯರಾದ ಅಬೂಬಕರ್ ಪಾಣಾಜೆ, ಮಹಮದ್ ಕುಂಞಿ ಹರ್ಲಡ್ಕ, ನಿವೃತ್ತ ಎ ಎಸ್ ಐ ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು .
ಎಲಿಮಲೆ ಜುಮಾ ಮಸೀದಿ ಮುದರಿಸ್ ಜೌಹರ್ ಅಹ್ಸನಿಯವರು ಪ್ರಾರ್ಥನೆ ನೆರವೇರಿಸಿ ಶುಭಕೋರಿದರು.. ಸಮಿತಿಯ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನುಸ್ರತ್ ಜೊತೆಕಾರ್ಯದರ್ಶಿ ಅಶ್ರಫ್ ದಿನಸಿಬಜಾರ್ ಹಾಗೂ ತರ್ಬಿಯತುಲ್ ಇಸ್ಲಾಂ ಎಸೋಸಿಯೇಶನ್ ಜೀರ್ಮುಕ್ಕಿ ಇದರ ಪದಾಧಿಕಾರಿಗಳು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.