(www.vknews.in)ಕೊಳ್ನಾಡು ಗ್ರಾಮ ನಾರ್ಶ ಶಾಲೆಯ 2023-2024 ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ನೇರಳಕಟ್ಟೆ ಅವರನ್ನು ಕೊಳ್ನಾಡು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು..
ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಾರ್ಶ ವಾರ್ಡಿನ ಗ್ರಾಮದ ಎಕೈಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರೌಢಶಾಲೆಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ಪ್ರತಿಭಾನ್ವಿತ, ಕ್ರಿಯಾಶೀಲ,ಹಲವಾರು ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಕ್ಕಳ ಮನೋವಿಕಸನ,ಸಾಮಾಜಿಕ ಬದ್ದತೆಗಳ ಬಗ್ಗೆ ಮಂಡನೆ ನಡೆಸಿ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾಗಿದ್ದು ಇವರಿಗೆ ಇಂದು ಕೊಳ್ನಾಡು ಗ್ರಾಮ ಪಂಚಾಯತ್ ವತಿಯಿಂದ ಶಾಲಾ ಅಸೆಂಬ್ಲಿ ಸಂದರ್ಭದಲ್ಲಿ ಪ್ರೌಡ,ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಭಿನಂದನೆಯ ಸನ್ಮಾನ ಸಲ್ಲಿಸಲಾಯಿತು.ಅಭಿನಂದನಾ ಸಭೆಯನ್ನು ಉದ್ದೇಶಿಸಿ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ,ಸ್ಥಳೀಯ ಪ್ರತಿನಿಧಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತಾಡಿ ಶುಭ ಹಾರೈಸಿದರು.ಶಾಲೆಯ ಪ್ರೌಡ ಮತ್ತು ಕಾಲೇಜು ಕಛೇರಿಗೆ ಬೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಅದ್ಯಾಪಕರೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್. ಕೆ.ಸಾಲೆತ್ತೂರು, ಮಾಜಿ ಅದ್ಯಕ್ಷರಾದ ನೆಬಿಸಾ ಖಾದರ್,ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಇಸ್ಮಾಯಿಲ್ ನಾರ್ಶ,ಸಿಂಗಾರಿ ಸಮೂಹ ಸಂಸ್ಥೆಗಳ ಮಾಲಕ ಇಕ್ಬಾಲ್ ಸಿಂಗಾರಿ ನಾರ್ಶ, ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅದ್ಯಕ್ಷರಾದ ಯಾಕೂಬ್ ನಾರ್ಶ,ಸೋಮಶೇಖರ್ ಗೌಡ ತಾಳಿತ್ತನೂಜಿ,ಹಸೈನಾರ್ ತಾಳಿತ್ತನೂಜಿ,ಜಿಲ್ಲಾ ಪ್ರಶಸ್ತಿ ವಿಜೇತ ಸನ್ಮಾನಿತಗೊಂಡ ಗೋಪಾಲಕೃಷ್ಣ ನೇರಳಕಟ್ಟೆ, ಪ್ರಾಂಶುಪಾಲರಾದ ಅವಿಟಾ ರೀಟಾ ಡಿ.ಸೋಜಾ,ಮುಖ್ಯೋಪಾಧ್ಯಾಯರಾದ ಲತಾ ಮೇಡಂ,ಶಿಕ್ಷರಾದ ಶರತ್ ಚೌಟ ದೇವಸ್ಯ,ದೈಹಿಕ ಶಿಕ್ಷರಾದ ರಪೀಕ್ ಮಾಸ್ಟರ್,ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲತಾ ಮೇಡಂ ಸ್ವಾಗತಿಸಿ,ಗೋಪಾಲಕೃಷ್ಣ ನೇರಳಕಟ್ಟೆ ವಂದಿಸಿದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.