ಪುತ್ತೂರು (www.vknews.in) : ತಾಲೂಕಿನ ಕಾವು ನಿವಾಸಿ ಮುಹಮ್ಮದ್ ಹುಸೈನ್ ಹಾಜಿ (72) ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಕಾವು ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ಸಂಪಾದಕರಾದ ಅಬ್ದುಲ್ ಹಮೀದ್ ಸಿ.ಹೆಚ್ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಯ್ಯತ್ ನಮಾಝಿಗೆ ಅಭ್ಯರ್ಥನೆ ; ದಿನಾಂಕ 15.09.2023ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ತಮ್ಮ ತಮ್ಮ ಮಸೀದಿಯಲ್ಲಿ ಮೇಲೆ ತಿಳಿಸಿದ ಮುಹಮ್ಮದ್ ಹುಸೈನ್ ಹಾಜಿ ಕಾವು, ಇವರ ಹೆಸರಿನಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ, ಮಗ್ಫಿರತ್ ಗಾಗಿ ಪ್ರಾರ್ಥಿಸಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.