ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಕ್ತದಾನಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯು ಕೊರೋನಾ ಲಾಕ್ಡೌನ್ ಆರಂಭವಾದ ಬಳಿಕ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ರಕ್ತನಿಧಿಗಳಲ್ಲಿ ಬರೋಬ್ಬರಿ ಐನೂರು ಯುನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಕುಂದಾಪುರ ಮತ್ತು ಬೈಂದೂರು ರೆಡ್ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ನಾಲ್ಕು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 319 ಯುನಿಟ್ ರಕ್ತವನ್ನು ಕುಂದಾಪುರ ರೆಡ್ಕ್ರಾಸ್ ರಕ್ತನಿಧಿಯಲ್ಲಿ ಸಂಗ್ರಹಿಸಲಾಗಿದೆ. ಅದೇ ರೀತಿ ದ.ಕ ಜಿಲ್ಲೆಯ ವಿವಿಧ ರಕ್ತನಿಧಿಗಳಲ್ಲಿ ಸುಮಾರು 181 ಮಂದಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲಾಗಿದೆ. ಅಷ್ಟೇ ಅಲ್ಲದೆ ದಾನಿಗಳ ಸಹಕಾರದಿಂದ ಸುಮಾರು 150ರಷ್ಟು ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಗಿದೆ ಹಾಗೂ ಲಾಕ್ಡೌನ್ ಆರಂಭದಿಂದಲೇ ಸಂಸ್ಥೆಯ ನಿರ್ವಾಹಕರ ತಂಡ ಅಗತ್ಯ ಆರೋಗ್ಯ ಸೇವೆಗಳಲ್ಲಿ ಕಾರ್ಯನಿರತವಾಗಿದೆ. ಅದೇ ರೀತಿ ನಗರದ ರಕ್ತನಿಧಿಗಳಲ್ಲಿ ಈಗಲೂ ರಕ್ತದ ಅಭಾವ ಕಾಡುತ್ತಿದ್ದು, ರಕ್ತದಾನ ಮಾಡಲಿಚ್ಛಿಸುವ ದಾನಿಗಳಿಗೆ ಸಂಸ್ಥೆಯ ವತಿಯಿಂದ ಸರ್ವವಿಧದ ಸಹಕಾರ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.