ಹರೇಕಳ(ವಿಶ್ವಕನ್ನಡಿಗ ನ್ಯೂಸ್): ಹರೇಕಳ ಗ್ರಾಮದಲ್ಲಿ ವಾಸಿಸುತ್ತಿರುವ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ, ಕುಟುಂಬದ ಆಧಾರ ಸ್ಥಂಭವಾಗಿದ್ದ ನಿಸಾರ್ ಎಂಬವರು ಕಳೆದ ಆರು ವರ್ಷಗಳಿಂದ ತೀರಾ ಕೈನೋವಿನಿಂದ ಬಳಲುತ್ತಿದ್ದು, ದುಡಿಮೆಗಾಗಿ ಜಮಾತಿನ ಮಸೀದಿ ಉಸ್ತಾದರಿಗೆ ಊಟವನ್ನು ತಲುಪಿಸುವ ಕೆಲಸವನ್ನು ಮಾಡಿಕೊಂಡು ಸಿಗುವ ಚಿಲ್ಲರೆ ಸಂಬಳದೊಂದಿಗೆ ವಾಸಿಸಲು ಸರಿಯಾದ ಯಾವುದೇ ಮೂಲ ಸೌಕರ್ಯಗಳಿಲ್ಲದ ಮನೆಯಲ್ಲಿ ಬಹಳ ಕಷ್ಟದಿಂದ ದಿನಸಾಗಿಸುತ್ತಿರುವ ಬಗ್ಗೆ ಸಮಾಜಸೆವಕ ಇಲ್ಯಾಸ್ ಮಂಗಳೂರು ಅವರ ನೇತೃತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ MNG ಫೌಂಡೇಶನ್ ಪದಾಧಿಕಾರಿಗಳ ಗಮನಕ್ಕೆ ಬಂದಿತ್ತು.
ಇದನ್ನು ಮನಗಂಡು ಇಂದು MNG ಫೌಂಡೇಶನ್ ವತಿಯಿಂದ ದಾನಿಗಳ ಸಹಾಯದೊಂದಿಗೆ ಹರೇಕಳದಲ್ಲಿ ನಿಸಾರ್ ಅವರಿಗೆ ನೂತನವಾಗಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು. ಇದರ ಭಾಗವಾಗಿ ಇಂದು MNG ಫೌಂಡೇಶನ್ ಸಂಸ್ಥೆಯ ಗೌರವಾಧ್ಯಕ್ಷರಾದ ಜನಾಬ್ ಮುನೀರ್ ಮೊೈದಿನ್ ಹಾಗೂ ಯುವ ಉದ್ಯಮಿ ಮೊಹಮ್ಮದ್ ಶರೀಫ್ ತುಂಬೆ ಅವರ ನೇತೃತ್ವದಲ್ಲಿ ಸಂಸ್ಥೆಯ ಪ್ರಥಮ ಯೋಜನೆಗಳಲ್ಲೊಂದಾದ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನೆರವೇರಿತು.
ಈ ಸಂಧರ್ಭದಲ್ಲಿ ಹರೇಕಳ ಜುಮಾ ಮಸೀದಿ ಮುಹಝ್ಝಿನ್ ಮಾಹಿನ್ ಮುಸ್ಲಿಯಾರ್, ಮಸೀದಿ ಅಧ್ಯಕ್ಷ ಮುಸ್ತಫಾ,ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಹಾಗೂ MNG ಫೌಂಡೇಶನ್ ಪದಾಧಿಕಾರಿಗಳಾದ ಮಹಮ್ಮದ್ ಇಲ್ಯಾಸ್ ಮಂಗಳೂರು, ಇಬ್ರಾಹಿಮ್ ಮೋನು ನಂದಾವರ, ಸಿದ್ದೀಕ್ ಕೊಳಕೆ, ನಕಾಶ್ ಬಾಂಬಿಲ, ಮಹಮ್ಮದ್ ಇಶಾಕ್ ತುಂಬೆ, ರಫೀಕ್ ಪಾನೆಲ, ಬಶೀರ್ ಪರ್ಲಡ್ಕ, ಫಯಾಝ್ ಮಾಡೂರು, ಮುಖ್ತಾರ್ ಅಕ್ಕರಂಗಡಿ, ಅನಸ್ ವಿಟ್ಲ, ಅಬ್ದುಲ್ ಜಲೀಲ್ ಉಪ್ಪಿನಂಗಡಿ, ಅಬ್ದುಲ್ ಮಜೀದ್ ಉಳ್ಳಾಲ ಹಾಗೂ ಮಹಮ್ಮದ್ ಶಾಕಿರ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.