ಸುಳ್ಯ(ವಿಶ್ವ ಕನ್ನಡಿಗ ನ್ಯೂಸ್): ವಿಶ್ವದಾಧ್ಯಂತ ಕೋರೋನ ನಿಯಂತ್ರಣದಲ್ಲಿದ್ದರೂ ನಮ್ಮ ದೇಶದಲ್ಲಿ ಕೋರೋನ ಎರಡನೇ ಅಲೆ ಉಂಟಾಗಲು ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯವೇ ಕಾರಣ, ಚುನಾವಣೆ ಸಭೆ ಸಮಾರಂಭಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸಾವಿರಾರು ಮಂದಿ ಸಭೆ ಸಮಾರಂಭಕ್ಕೆ ಸೇರುವುದಕ್ಕೆ ಅವಕಾಶ ಕೊಟ್ಟಿರುವುದು ಎರಡನೆಯ ಅಲೆಯ ಆರಂಭದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸರಕಾರ ವಿಫಲವಾಗಿರುತ್ತದೆ.
ಸರಕಾರ ಇನ್ನು ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲು ವಿಫಲವಾಗಿದು ಆದುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ವಸತಿ ಗ್ರಹಗಳನ್ನು ವಶಕ್ಕೆ ಪಡೆದು ತಾತ್ಕಾಲಿಕ ಆಸ್ಪತ್ರೆ ಯಾಗಿ ಪರಿವರ್ತಿಸುವ ಅಗತ್ಯವಿದೆ.
ಕೋರೋನ ಸೋಂಕಿತರಿಗೆ ಚಿಕಿತ್ಸೆ ಕೊಡುವ ಚಿಕಿತ್ಸೆ ಬಗ್ಗೆ ಜನತೆ ಸಂಶಯ ಹೊಂದಿದ್ದು ಆಸ್ಪತ್ರೆಗೆ ದಾಖಲಾದರೆ ಸಾವನ್ನಪ್ಪುತ್ತಾರೆ ಎಂದು ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಇಂದು ಜನತೆ ವಿಶ್ವಾಸವನ್ನು ಕಳೆದುಕೊಂಡಿರುತಾರೆ. ಮತ್ತೊಂದು ರೀತಿಯಲ್ಲಿ ಕೊರೊನಾದಿಂದ ಜನತಾ ಕರ್ಫ್ಯೂ ಹೇರುವ ಮೂಲಕ ಮಧ್ಯಮ ಹಾಗೂ ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಸಂಕಷ್ಟದಲ್ಲಿದ್ದು ಅವರ ಸಮಸ್ಯೆಗೆ ಸರಕಾರ ಯಾವುದೇ ಪರಿಹಾರ ಸೂಚಿಸಿಲ್ಲ.
ಕೃಷಿ ಕೆಲಸಗಳಿಗೆ ಅವಕಾಶ ಕಲ್ಪಿಸಿದರೂ ಸಂಚಾರಕ್ಕೆ ವ್ಯವಸ್ಥೆ ಇಲ್ಲ ವಾಹನಗಳಲ್ಲಿ ತೆರಳದೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡು ಕೊಳ್ಳುವುದು ಕಷ್ಟಕರವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣವಾಗಿ ಎಲ್ಲಾ ಹಂತದಲ್ಲೂ ವಿಫಲವಾಗಿರುತ್ತದೆ.
ತೇಜಸ್ವಿ ಸೂರ್ಯ ರಂತಹ ಅಪ್ರಬುದ್ಧ ಸಂಸದರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೊರೋನಕ್ಕಿಂತ ಮಾರಕವಾದ ಕೋಮು ವೈರಸ್ಸನ್ನು ಉತ್ಪಾದಿಸುವ ನೀಚ ಕೆಲಸ ಮಾಡುವ ಪ್ರಯತ್ನ ಸರಿಯಲ್ಲ. ಅವರದೇ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿದ್ದರೂ ಮಾರಕ ರೋಗ ವಾದ ಕೋರೋನ ತಡೆಗಟ್ಟುವಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಒಪ್ಪಿಕೊಂಡಿರುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರ ಆಡಳಿತ ಮಾಡಲು ಜನತೆಗೆ ಆರೋಗ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ರಾಷ್ಟ್ರಪತಿ ಅವರು ದೇಶದ ಜನತೆ ಹಿತದೃಷ್ಟಿಯಿಂದ ಈ ಸರಕಾರಗಳನ್ನು ವಜಾಗೊಳಿಸಬೇಕು. ಆಕ್ಸಿಜನ್ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ವ್ಯವಸ್ಥೆ ಮಾಡಿರುವುದು ಈ ಸರಕಾರಗಳು ವೈಫಲ್ಯ ಗೊಂಡಿರುವುದಕ್ಕೆ ನಿದರ್ಶನ.
ಆದುದರಿಂದ ರಾಷ್ಟ್ರಪತಿಗಳು ಈ ಸರಕಾರಗಳನ್ನು ವಜಾಗೊಳಿಸಿ ಕೂಡಲೇ ಈ ದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ದೇಶದ ಜನತೆಗೆ ಕೋರೋನಕ್ಕೆ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿ ಸಾವು ನೋವುಗಳನ್ನು ತಪ್ಪಿಸಿ ಜನತೆಯಲ್ಲಿ ಮಾಸಿ ಹೋಗಿರುವ ಆತ್ಮ ವಿಶ್ವಾಸವನ್ನು ಮೂಡಿಸಬೇಕೆಂದು ಜಾತ್ಯತೀತ ಜನತಾದಳ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆಯವರು ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.