ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿಶ್ವ ಅಮ್ಮಂದಿರ ದಿನಾಚರಣೆ ಯನ್ನು ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಅನ್ ಲೈನ್ ಮೂಲಕ ಭಾನುವಾರ ವಿಶೇಷವಾಗಿ ಆಚರಿಸಲಾಯಿತು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷರು ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಜೆಸಿಐ ವಲಯ ಅಧ್ಯಕ್ಷರು ಆಗಿರುವ ನಟಿ, ಖ್ಯಾತ ನಿರೂಪಕಿ ಸೌಜನ್ಯ ಹೆಗ್ಡೆ ಅಧ್ಯಕ್ಷತೆಯನ್ನು ವಸಿದ್ದರು. ಡಾ. ಪದ್ಮಿನಿ ನಾಗರಜು, ವಂದನಾ ರೈ ಕಾರ್ಕಳ, ವೀಣಾ ಪ್ರಸನ್ನ ಕಾಸರಗೋಡು, ಶ್ವೇತಾ ಜೈನ್ ಮೂಡುಬಿದಿರೆ, ಪ್ರಸನ್ನಾ ಪ್ರಸಾದ್ ಭಟ್ ಉಡುಪಿ, ಸುರೇಖ ಶೆಟ್ಟಿ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಿಯದರ್ಶನಿ ಮಂಗಳೂರು ನಿರೂಪಿಸಿದರು.
ಪದ್ಮಪ್ರಿಯಾ ಕೇಳ ಮೂಡುಬಿದಿರೆ ಪಾರ್ಥನೆ ಹಾಡಿದರು. ಸ್ಪೂರ್ತಿ ಜೈನ್ ಬೆಂಗಳೂರು ಹಾಗೂ ನಿರಂಜನ್ ಜೈನ್ ಕುದ್ಯಾಡಿ, ಸಹಕರಿಸಿದರು. ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.