ಗಜಲ್
ಊಟ ಸೇರುತ್ತಿಲ್ಲ ಅಲ್ಲೊಬ್ಬ ತುತ್ತು ಬೇಡುತ್ತಿದ್ದಾನೆ ಈಗ ಗಾಳಿ ಬೀಸುತ್ತಿಲ್ಲ ಇನ್ನೊಬ್ಬ ಉಸಿರು ಮಾರುತ್ತಿದ್ದಾನೆ ಈಗ
ಹಣವಿದ್ದರೆ ಸಾಕು ಬದುಕು ಬಲು ಸುಲಭವಿತ್ತು ಇಲ್ಲಿ ಬೇರು ಸಿಕ್ಕುತ್ತಿಲ್ಲ ಮತ್ತೊಬ್ಬ ಬೀಜ ಬಿತ್ತುತ್ತಿದ್ದಾನೆ ಈಗ
ಬೆದರು ಗೊಂಬೆಯ ಕೈಯಲ್ಲಿ ಆನೆ ಬಲವಿದ್ದರೆ ಸಾಕೇ ದೇವ ನೋಡುತ್ತಿಲ್ಲ ಬೇರೊಬ್ಬ ಬಂದು ಕಾಯುತ್ತಿದ್ದಾನೆ ಈಗ
ಸತ್ತ ಹೆಣಕ್ಕೆ ಯಾವ ಜಾತಿ ಹೆಗಲು ಪ್ರಶ್ನೆ ಕೇಳುವುದಿಲ್ಲ ಬೆಂಕಿ ಬೇಡುತ್ತಿಲ್ಲ ಇಲ್ಲೊಬ್ಬ ಕೊಳ್ಳಿ ಇಡುತ್ತಿದ್ದಾನೆ ಈಗ
ಬಣ್ಣವೇ ಇಲ್ಲ ಎಂತಾ ನಾಟಕ ಶಾಲೆ ನೋಡು ಸಾವನ್ ನೀನು ಸಾಯುತ್ತಿಲ್ಲ ಮತ್ತೊಬ್ಬ ಪಾತ್ರ ಹಾಕುತ್ತಿದ್ದಾನೆ ಈಗ
ಸಾವನ್_ಕೆ_ಸಿಂಧನೂರು 9902858592
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.