ಕೋಲಾರ (www.vknews.com) : ಬೆಳೆಗಳಿಗೆ ಕಾಡುವ ಜೈವಿಕ ಪೀಡೆಗಳಲ್ಲಿ ರೋಗ ಮತ್ತು ಕೀಟಕ್ಕೆ ಹೋಲಿಸಿದರೆ ಕಳೆಗಳಿಂದ ಆಗುವ ನಷ್ಟ ಅಧಿಕವಾಗಿದೆ ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಕಳೆಗಳ ಬೆಳವಣಿಗೆಯು ಯಥೇಚ್ಛವಾಗಿ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಐಸಿಎಆರ್ -ಕೃಷಿವಿಜ್ಞಾನ ಕೇಂದ್ರ ಕೋಲಾರವು ಸೋಮವಾರ ತೋಟಗಾರಿಕೆ ಬೆಳೆಗಳಲ್ಲಿನ ಕಳೆಗಳ ಸಮಗ್ರ ನಿರ್ವಹಣೆ ಎಂಬ ಅಂತರ್ಜಾಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಬೇಸಾಯ ಶಾಸ್ತ್ರಜ್ಞರಾದ ಡಾ.ಸಂಜಯ್ಎಂ.ಟಿ. ಈ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರೈತ ಸಮುದಾಯಕ್ಕೆ ಕಳೆಗಳಲ್ಲಿ ಇರುವ ಬಗೆಗಳು ಅವುಗಳಿಂದ ಆಗುವ ಹಾನಿಯ ಬಗ್ಗೆ ಅಂಕಿ-ಅಂಶಗಳನ್ನು ನೀಡುತ್ತಾ ಸವಿಸ್ತಾರವಾಗಿ ತಿಳಿಸಿದರು. ಕೆಲವೊಂದು ಕಳೆಗಳನ್ನು ಹಸಿರೆಲೆ ಗೊಬ್ಬರವಾಗಿ,ದನಗಳಿಗೆ ಮೇವಾಗಿ,ಔಷಧಿಯಾಗಿ ಆಹಾರವಾಗಿ ಕೂಡ ಸೇವಿಸಬಹುದು ಎಂದು ತಿಳಿಸಿದರು.
ರೈತರು ಕಳೆಗಳನ್ನು ಹೋಗಲಾಡಿಸಲು ಕಳೆ ನಾಶಕಗಳ ಮೇಲೆ ಅವಲಂಬಿತರಾಗದೆ ಸಮಗ್ರ ಪದ್ಧತಿ ಅಳವಡಿಸಿಕೊಳ್ಳುವುದು, ಅವುಗಳೆಂದರೆ ಮಾಗಿ ಉಳುಮೆ ಮಾಡುವುದು, ಯಾಂತ್ರಿಕವಾಗಿ ಯಂತ್ರಗಳನ್ನು ಬಳಸಿ ಕೀಳುವುದು, ಜೈವಿಕ ವಾಗಿಯೂ ಕೂಡ ಹತೋಟಿ ಮಾಡಬಹುದು ಎಂದರು. ಕಳೆಗಳಲ್ಲಿ ಮೂರು ವಿಧಗಳು ಇರುತ್ತವೆ ಅವುಗಳೆಂದರೆ ಹುಲ್ಲು ಜಾತಿ,ಸೊಪ್ಪು ಜಾತಿ ಮತ್ತು ಅಗಲ ಎಲೆಯ ಜಾತಿಗಳು ಈ ಕಳೆಗೆ ಅನುಗುಣವಾಗಿ ಕಳೆನಾಶಕಗಳನ್ನು ಸಿಂಪಡಿಸಬೇಕು. ಈ ತರಬೇತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿ ತಮ್ಮ ಬೆಳೆಗಳಲ್ಲಿನ ಬೆಳೆಗಳ ಸಮಗ್ರ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.ಐಸಿಎಆರ್ ನ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ.ಅಂಬಿಕಾ ಡಿ.ಎಸ್ ತರಬೇತಿಯನ್ನು ಸಂಯೋಜಿಸಿದ್ದರು.
ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.