ಶ್ರೀನಿವಾಸಪುರ (www.vknews.com):- ಮಾವಿನ ರಾಜಧಾನಿ ಎಂದು ಖ್ಯಾತವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹಣ್ಣುಗಳ ದೇಶಾದ್ಯಂತ, ಹೊರ ರಾಜ್ಯಗಳಾದ ಮಹಾರಾಷ್ಟ್ರ , ಗುಜರಾತ್ , ಉತ್ತರ ಪ್ರದೇಶ , ಮಧ್ಯಪ್ರದೇಶ , ಬಿಹಾರ್ , ವೆಸ್ಟ್ ಬೆಂಗಾಲ್ , ಪಂಜಾಬ್ , ಛತ್ತೀಸ್ ಗಢ , ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ್ ಆಂಧ್ರಪ್ರದೇಶ , ತಮಿಳುನಾಡು. ರಾಜ್ಯಗಳ ಕರೆಸಿಕೊಳ್ಳುವ ಮಾವು ಕೋವಿಡ್ ಲಾಕ್ಡೌನ್ ಸಂಕಷ್ಟದಿಂದಾಗಿ ರೈತರ ಪಾಲಿಗೆ ಕಹಿಯಾ ಗಿದ್ದು , ಸರ್ಕಾರ ಹೆಕ್ಟೇರ್ಗೆ ಘೋಷಿಸಿರುವ 10 ಸಾವಿರ ಪ್ಯಾಕೇಜ್ “ ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಣ್ಣುಗಳ ರಾಜನೆಂದೇ ಕರೆಯಲ್ಪಟುವ ಮಾವಿನ ತವರೂರಾದ ಕೋಲಾರದ ಶ್ರೀನಿವಾಸಪುರದ ಮಾವು ಇನ್ನೂ ಮಾರುಕಟ್ವೆಯ ಹೊಸ್ತಿಲು ತುಳಿಯುವ ಮುನ್ನವೇ ಹೊರ ರಾಜ್ಯದ ವಿವಿಧ ತರಾವರಿಯ ಮಾವು ತಿಂಗಳ ಮೊದಲೇ ಮಾರುಕಟ್ಟೆಯಲ್ಲಿ ಸಿಗಲಾರಂಭಿಸಿತ್ತು. ಶ್ರೀನಿವಾಸಪುರದಲ್ಲಿ ಮೇ 5 ರಿಂದಲೇ ಮಾವಿನ ಮಂಡಿಗಳಿಗೆ ಮಾರುಕಟ್ಟೆ ಆರಂಭಿಸಲಾಗಿದ್ದು , ಮೇ 16 ರ ನಂತರವೇ ಶ್ರೀನಿವಾಸಪುರದ ಕೆಲವು ತಳಿಗಳ ಮಾವು ಎ ಪಿ ಎಂ ಸಿ ಮತ್ತು ಮಾವಿನ ಮಂಡಿಗಳಿಗೆ ಮಾರುಕಟ್ಟೆಗೆ ಬರಲಾ ಆರಭಿಸಿದೆ. ಸರ್ಕಾರ ಮಾರುಕಟ್ಟೆ ಸೌಲಭ್ಯ ನೀಡಿದ್ದರೂ , ದೂರದ ವ್ಯಾಪಾರಿಗಳು ಕೋವಿಡ್ ಭಯದಿಂದ ಇತ್ತ ಸುಳಿಯದ ಕಾರಣ ಮಾರಾಟವೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ . ರಾಜ್ಯದ ಸುಮಾರು ಶೇ .60 ಮಾವು ಜಿಲ್ಲೆಯದ್ದೇ ರಾಜ್ಯದಲ್ಲಿ ಉತ್ಪಾದನೆ ಯಾಗುವ ಒಟ್ಟು ಮಾವಿನಲ್ಲಿ ಶೇ .60 ಕ್ಕಿಂತಲೂ ಹೆಚ್ಚು ಮಾವು ಬೆಳೆಯುವುದು ಕೋಲಾರ ಜಿಲ್ಲೆಯಲೇ . ಅದರಲ್ಲೂ ಶ್ರೀನಿವಾಸಪುರದಲ್ಲೇ ಸುಮಾರು 30 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ. ಉಳಿದಂತೆ ಬಂಗಾರಪೇಟೆ 4562 , ಕೋಲಾರ -5574 ಮಾಲೂರು -1471 , ಮುಳಬಾಗಲು -16,870 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು ಸುಮಾರು 60,172 ಹೆಕ್ಟೇರ್ನಲ್ಲಿ ಬೆಳೆಯಲಾಗುತ್ತಿದೆ. ಇನ್ನು ಮಾವು ಎಂದೊಡನೇ ನೆನಪಿಗೆ ಬರುವ ಶ್ರೀನಿವಾಸಪುರದ ಮಣ್ಣಿನ ಮಹಿಮೆ , ಫಲವತ್ತತೆ ಮಾವು ಬೆಳೆಗೆ ಪ್ರಕೃತಿಯೇ ಹೇಳಿ ಮಾಡಿಸಿಕೊಟ್ಟಂತಿದೆ. ಇಲ್ಲಿನ ಮರಳು ಮಿಶ್ರಿತ ಕೆಮ್ಮಣ್ಣು ವಿಶೇಷತೆ . ಯಾವುದೇ ತಳಿಯಿರಲಿ , ಈ ನೆಲದಲ್ಲಿ ಬೆಳೆದ ಮಾವು ಹುಳಿ ಕಡಿಮೆ . ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟಕರವಾಗಿ ಎಲ್ಲರ ಬಾಯಲ್ಲಿ ನೀರೂರಿಸುವ ಸಾಮರ್ಥ್ಯ ಹೊಂದಿದೆ. ಜಿಲ್ಲೆಯಲ್ಲಿ ರಸಪೂರಿ , ಬಾದಾಮಿ , ಮಲ್ಲಿಕಾ , ಮಲಗೋಬಾ , ಬೇನಿಷಾ , ಖುದ್ದೂಸ್ , ರಾಜಗೀರಾ , ಕಾಲಾಪಾಡ್ , ಶೇಕರ್ ಬೀಜ್ ,ತೋತಾಪುರಿ , ನೀಲಂ , ಆಲೋನ್ಸಾ , ಅಲೈಟ್ , ತಳಿಯ ಮಾವು ಹೆಚ್ಚು ಬೆಳೆಯುಲಾಗುತ್ತಿದೆ. ಮಾವು ಬೆಳೆ ಎರಡು ವರ್ಷಕ್ಕೊಮ್ಮೆ ಉತ್ತಮ ಇಳುವರಿ ಸಿಗುತ್ತದೆ . ಕಳೆದ ವರ್ಷ ಮತ್ತು ಈ ವರ್ಷ ಉತ್ತಮ ಬೆಳೆಯಾಗಿದ್ದರೂ ಕೋವಿಡ್ ಮಾರಿ ರೈತರನ್ನು ಕಾಡುತ್ತಿದೆ . ಒಂದು ವರ್ಷ ಉತ್ತಮ ಬೆಳೆಯಾದರೆ ಮತ್ತೊಂದು ವರ್ಷ ಕಡಿಮೆ ಫಸಲು ಸಿಗುತ್ತದೆ , ಈ ಬಾರಿ ಆಲಿಕಲ್ಲುಳೆ , ಬಿರಳಿಯ ಪ್ರತಾಪ ಇಲ್ಲದ ಕಾರಣ ಮರಗಳಲ್ಲಿ ಉತ್ತಮ ಫಸಲು ಇದೆ ಆದರೆ ಕೋವಿಡ್ ಲಾಕ್ಡೌನ್ ನಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ರೈತ ಮತ್ತು ವ್ಯಾಪಾರಸ್ಥರಿಗೆ ಕಂಗೆಡುವಂತಾಗಿದೆ. ಈ ಬಾರಿ ಮಾವಿನ ಕಾಯಿಗೆ ಬೆಲೆ ಸಿಗದೇ ಮಾವು ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಯಿಗಳನ್ನು ಕೊಯ್ಲುಮಾಡಿ ತಂದು ಮಾರುಕಟ್ಟೆಯಲ್ಲಿ ರಾಶಿ ಹಾಕುತ್ತಿದ್ದಾರೆ. ‘ರಸ ತಯಾರಿಕೆಗೆ ಹೋಗುವ ತೊತಾಪುರಿ ಮಾವು ಕಾಯಿ ಟನ್ಗೆ ₹8 ಸಾವಿರದಂತೆ ಮಾರಾಟ ವಾಗುತ್ತಿದೆ. ಬಣ್ಣದ ತೊತಾಪುರಿ ಮಾವು ಕಾಯಿಯನ್ನು ತಿನ್ನಲು ಖರೀದಿಸಲಾಗುತ್ತದೆ. ಅಂಥ ಕಾಯಿಯ ಬೆಲೆ ಟನ್ಗೆ ₹ 12-15 ಸಾವಿರದಂತೆ ಖರೀದಿಯಾಗುತ್ತಿದೆ. ಉಳಿದಂತ ಬಾದಾಮಿ ಬೆಲೆ ಟನ್ಗೆ ₹ 42 – 55 ಸಾವಿರ , ಲಾಲ್ ಬಾಗ್ (ರಾಜಗೀರಾ) ಮಾವು ಟನ್ ಗೆ ₹ 10-15 ಸಾವಿರ , ಮಲ್ಲಿಕಾ ಕಾಯಿಯ ಬೆಲೆ ಟನ್ಗೆ ₹ 20-25 ಸಾವಿರ ,ಬೇನಿಷಾ ಕಾಯಿಯ ಬೆಲೆ ಟನ್ಗೆ ₹ 18-22 ಸಾವಿರ ,ಮಾಲ್ಗೋಬಾ ಕಾಯಿಯ ಬೆಲೆ ಟನ್ಗೆ ₹ 40-50 ಸಾವಿರ , ಶೇಕರ್ ಬೀಜ್ ಕಾಯಿಯ ಬೆಲೆ ₹ 35-45 ಸಾವಿರ , ಕಲಾ ಪಹಡಾ ಕಾಯಿಯ ಬೆಲೆ ಟನ್ಗೆ ₹ 35-45 ಸಾವಿರ , ರಾಸ್ ಪುರಿ ಕಾಯಿಯ ಬೆಲೆ ಟನ್ಗೆ ₹ 10-15 ಸಾವಿರ, ಇಮಾಮ್ ಪಸಂದ್ ಕಾಯಿಯ ಬೆಲೆ ಟನ್ಗೆ ₹ 50 – 65 ಸಾವಿರ, ನಾಟಿ ₹ 4 ಸಾವಿರ, ತಳಿಯ ಮಾವಿನ ಕಾಯಿ ಟನ್ಗೆ ಮಾರಾಟವಾಗುತ್ತಿದೆ’ ಎಂದು ಎ ಎಫ್ ಸಿ ಮಾವು ಮಂಡಿ ಮಾಲಿಕರು ಆಯಾಜ್ ಪಾಷ ವಿಶ್ವ ಕನ್ನಡಿಗ ನ್ಯೂಸ್ ಗೆ ತಿಳಿಸಿದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.