ಪುತ್ತೂರು(ವಿಶ್ವಕನ್ನಡುಗ ನ್ಯೂಸ್): ಹೌದು ಪುತ್ತೂರು ಸಂಚಾರಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಚಿರಪರಿಚಿತರಾಗಿರುವ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ಜನಸ್ನೇಹಿ ಪೊಲೀಸ್ ಸ್ಕರಿಯ ಸರ್ ಬಗ್ಗೆ ಹೇಳಲೇಬೇಕೆನಿಸಿತು. ಯಾಕೆಂದರೆ ! ಕೊರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ರಾತ್ರಿ ಹಗಲೆನ್ನದೆ ಗಾಳಿ ಮಳೆ ಲೆಕ್ಕಿಸದೆ ಕೊರೋನಾ ಮುಕ್ತ ಪುತ್ತೂರು ಮಾಡಬೇಕು ಎಂದು ಪಣತೊಟ್ಟವರಲ್ಲಿ ಇವರೂ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು.
ಕೇವಲ ತನ್ನ ಕೆಲಸ ಮಾತ್ರವಲ್ಲದೆ , ಬಿಡುವಿನ ಸಮಯದಲ್ಲಿ ಕೂಡ ಇವರು ಅದೆಷ್ಟೋ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಇವರ ಬಗ್ಗೆ ಹೇಳಲು ಕಾರಣವೂ ಇದೆ.ಯಾಕೆಂದರೆ ಇಂತಹ ವ್ಯಕ್ತಿತ್ವದವರು ಸಿಗೋದು ಕಡಿಮೆಯೇ.. ತನಗೆ ಸಿಗುವ ಸಂಬಳದಿಂದ ಒಂದಷ್ಟು ಹಣವನ್ನು ಅರ್ಹರಿಗೆ ನೀಡಲು ಬಂದಿರುವ ಇವರ ಒಳ್ಳೆಯತನಕ್ಕೆ ನಾವೆಲ್ಲರೂ ತಲೆಬಾಗಲೇಬೇಕು.
ಕೊರೊನಾ ಮುಕ್ತ ಪುತ್ತೂರಿಗಾಗಿ ಎಂಬ ಧ್ಯೇಯದೊಂದಿಗೆ ಕಳೆದ ತಿಂಗಳು ಲೋಕಾರ್ಪಣೆಗೊಂಡ ಎಚ್.ಎಂ.ಸಿ. ಜನಜಾಗೃತ್ ದಳ್ ಎಂಬ ಸಂಘಟನೆಯೊಂದಿಗೆ ಕೂಡ ಕೈ ಜೋಡಿಸಿ ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಹಲವು ನಿರ್ಗತಿಕ, ಬಡವರಿಗೆ ಧನಸಹಾಯ ಮಾಡುವ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಇವರನ್ನು ನಿಜವಾಗಿಯೂ ಅಭಿನಂದಿಸಲೇಬೇಕು..
ಹಾಟ್ಸ್ ಆಫ್ ಸ್ಕರಿಯ ಸರ್.!
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.