ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ) :- ಕೋವಿಡ್ ಮಾರಿಯನ್ನು ತಡೆಯಲು ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕೆರೂನಾ ಲಸಿಕ ಮೇಳ ಉದ್ಘಾಟಿಸಿ ಮಾತನಾಡಿ , ಕೆಲವರು ಮೂಢನಂಬಿಕೆ ಹಾಗೂ ಅಪಪ್ರಚಾರದಿಂದಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ . ಅದು ಸರಿಯಲ್ಲ . ಲಸಿಕೆಯಿಂದ ಯಾವುದೇ ಪ್ರತಿ ಪರಿಣಾಮ ಉಂಟಾಗುವುದಿಲ್ಲ . ಬದಲಿಗೆ ದೇಹದಲ್ಲಿ ರೋಗ ತಡೆಯುವ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು .
ಪಟ್ಟಣದಲ್ಲಿ ಲಸಿಕೆ ಪಡೆಯಲು ಯೋಗ್ಯರಾದ ೨೩ ಸಾವಿರ ಮಂದಿಯಿದ್ದಾರೆ . ಆ ಪೈಕಿ ಈವರೆಗೆ ೧೩ ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ . ೧೦ ಸಾವಿರ ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ . ೧೮ ವರ್ಷ ಮೇಲಟ್ಟ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುವುದು . ಸ್ವಯಂ ಪ್ರೇರಣೆಯಿಂದ ನಿಗದಿತ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷ ಲಲಿತಾ ಶ್ರೀನಿವಾಸ್ , ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ , ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್ , ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ , ಟಿ.ನಾಗಲಕ್ಷ್ಮಿ , ಹಸ್ಮಾ , ಆಂಜಮ್ಮ , ಶಿವು , ಜಿ.ಆನಂದ್ , ಅಮರೇಶ್ ಇದ್ದರು . ವರದಿ ಶಬ್ನೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.