ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):- ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನರ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ರಕ್ಷಣೆ , ಅಕರರಿಗೆ ರಕ್ಷಣೆ , ಆತ್ಮಸ್ಥೆರ್ಯ ತುಂಬುವ ಕೆಲಸದಲ್ಲಿ ತಮಗೂ ಅವಕಾಶ ನೀಡಿರುವುದಕ್ಕಾಗಿ ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ಮತ್ತು ತಂಡಕ್ಕೆ ನೌಕರರ ಸಂಘದ ನೂತನ ಉಪಾಧ್ಯಕ್ಷ ಹಾಗೂ ಗ್ರಾಮಲೆಕ್ಕಿಗರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ನೌಕರರ ಭವನದಲ್ಲಿ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಅವರನ್ನು ನರಸಾಪುರದ ಜೈಭೀಮ್ ಬಾಯ್ ತಂಡ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದರು . ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ಸಂಘಟನೆಗೆ ಬಲ ತುಂಬುವ ಕೆಲಸವನ್ನು ಮಾಡುವುದಾಗಿಯೂ , ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುವುದಾಗಿ ತಿಳಿಸಿದರು . ನರಸಾಪುರ ಗ್ರಾಪಂ ಸದಸ್ಯ ಗೋಪಿ ಮಾತನಾಡಿ , ನಮ್ಮೊಂದಿಗೆ ಉತ್ತಮ ಸ್ನೇಹಿತನಾಗಿ ಸದಾ ಜನಪರ ಕೆಲಸಗಳನ್ನು ಮಾಡುವ ಅಜಯ್ ಅವರಿಗೆ ನೌಕರರ ಸಂಘ ಉತ್ತಮ ಅವಕಾಶ ನೀಡಿದೆ ಎಂದು ಧನ್ಯವಾದ ಸಲ್ಲಿಸಿದರು.
ನರಸಾಪುರ ಜೈಭೀಮ್ ಜಾಬ್ ತಂಡದ ಗೋಪಿ , ಪ್ರಕಾಶ್ , ಹರೀಶ್ , ಕಿರಣ್ , ಸಿದ್ದಾರ್ಥ , ಮಂಜುನಾಥ್ , ಮಾರುತಿ , ವಿನಾಯಕ.ಪ್ರಸನ್ನ ಮತ್ತಿತರರು ನೂತನ ಉಪಾಧ್ಯಕ್ಷ ಅಜಯ್ಅವರನ್ನು ಅಭಿನಂದಿಸಿ ಶುಭ ಕೋರಿದರು . ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು , ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ವಿಜಯ್ , ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ.ಪದಾಧಿಕಾರಿಗಳಾದ ಗೌತವನ್ ಪುರುಷೋತ್ತಮ್ , ಶಿವಕುಮಾರ್.ಎಂ.ನಾಗರಾಜ್ .ಇಂಚರ ನಾರಾಯಣಸ್ವಾಮಿ ಮತ್ತಿತರರಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.