ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಕೇರಳ – ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಗಡಿಯ ಮುಖಾಂತರ ಹಾದು ಹೋಗುವವರಿಗೆ RT / PCR ಪರೀಕ್ಷೆಯನ್ನು ಕಡ್ಡಾಯಗೊಳಿಸಿದ ಕರ್ನಾಟಕ ಸರಕಾರದ ವಿರುಧ್ದ ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಕಮಿಟಿ ಕಾರ್ಯದರ್ಶಿ ಅಶ್ರಫ್ ಬಡಾಜೆ ಒಳಗೊಂಡ ಇತರ ರಾಜಕೀಯ ಪಕ್ಷಗಳ ಮುಖಂಡರ ವಿರುದ್ದ ದಾಖಲಿಸಿದ ಪ್ರಕರಣವನ್ನು ಕೈ ಬಿಡಬೇಕೆಂದು ಎಸ್.ಡಿ.ಪಿ.ಐ ಪಂಚಾಯತ್ ಕಮಿಟಿ ಅಧ್ಯಕ್ಷ ಸಲಾಂ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ಖಲೀಲ್ ಮಚ್ಚಂಬಾಡಿ ಆಗ್ರಹಿಸಿದರು.
ವಿದ್ಯಾಭ್ಯಾಸ, ಆರೋಗ್ಯ , ಉದ್ಯೋಗ ಎಂಬೀ ಆವಶ್ಯಕತೆಗಳಿಗೆ ಕಾಸರಗೋಡು ಜಿಲ್ಲೆಯ ಹೆಚ್ಚಿನವರು ದಿನನಿತ್ಯ ಆಶ್ರಯಿಸುವುದು ಮಂಗಳೂರನ್ನಾಗಿದೆ. ಕೊರೋನಾ ಲಸಿಕೆ ತೆಗೆದುಕೊಂಡವರಿಗೂ ಸಹ RT / PCR ಪರೀಕ್ಷೆ ನಿರ್ಭಂದಗೊಳಿಸಿದ ಕರ್ನಾಟಕ ಸರಕಾರವನ್ನು ಕೇರಳ ಸರಕಾರ ಸಂಪರ್ಕಿಸಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣುವುದರ ಬದಲು ಪ್ರತಿಭಟನಾಕಾರರ ವಿರುದ್ದ ಪ್ರಕರಣ ದಾಖಲಿಸಿರುವುದು ಜನದ್ರೋಹ ನೀತಿಯಾಗಿದೆ. ಬರುವ ದಿನಗಳಲ್ಲಿ ಗಡಿ ಪ್ರದೇಶದಲ್ಲಿ ನಿರ್ಭಂದಗಳಿಂದ ಸಡಿಲಿಕೆ ಮಾಡದಿದ್ದರೆ ಪಕ್ಷವು ದೊಡ್ಡ ಪ್ರಮಾಣದ ಚಳುವಳಿಗಳಿಗೆ ಮುಂದಾಳುತ್ವ ವಹಿಸಬೇಕಾದೀತೆಂದು ಪದಾಧಿಕಾರಿಗಳು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.