ಕೋಲಾರ (ವಿಶ್ವಕನ್ನಡಿಗ ನ್ಯೂಸ್):- ನಗರದ ಖಾದ್ರಿಪುರ ಸಮೀಪವಿರುವ ಶ್ರೀನಲ್ಲೂರಮ್ಮ ಅನಾಥಾಶ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿಯವರ ೬೬ ನೇ ಹುಟ್ಟು ಹಬ್ಬವನ್ನು ಶ್ರೀಗೋಕುಲ ಮಿತ್ರ ಬಳಗದಿಂದ ಭಾನುವಾರ ಆಚರಿಸಲಾಯಿತು.
ಆನಾಥಾಶ್ರಮದ ಎಲ್ಲಾ ಮಕ್ಕಳಿಗೂ ಚಿರಂಜೀವಿ ಹುಟ್ಟುಹಬ್ಬದ ಅಂಗವಾಗಿ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ಮಕ್ಕಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಮೆಗಾಸ್ಟಾರ್ ಚಿರಂಜೀವಿ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದು , ರಕ್ತದಾನ ಶಿಬಿರಗಳ ಮೂಲಕ ದಾಖಲೆ ಬರೆಯುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಚಿರಂಜೀವಿ ಅಭಿಮಾನಿಗಳು ಕೋವಿಡ್ ಬಾಧಿತರಿಗೆ ಆಮ್ಲಜನಕ ಕಾನ್ಸ್ಟೇಟ್ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ ಮಾನವೀಯ ಸೇವೆಯಲ್ಲಿಯೂ ಚಿರಂಜೀವಿ ಖ್ಯಾತರಾಗಿದ್ದು , ಅವರು ನೂರ್ಕಾಲ ಆರೋಗ್ಯದಿಂದ ಬದುಕಿ ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸಬೇಕೆಂದು ಹಾರೈಸುತ್ತಾ ಕೋಲಾರದ ಶ್ರೀಗೋಕುಲ ಮಿತ್ರಬಳಗದ ಸದಸ್ಯರ ಸಹಕಾರದಿಂದ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದಾಗಿ ಚಿರಂಜೀವಿ ಹುಟ್ಟು ಹಬ್ಬ ಆಯೋಜಿಸಿದ್ದ ಕೆ.ಜಯದೇವ್ ವಿವರಿಸಿದರು.
ಈ ಸಂದರ್ಭದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ಶ್ರೀಗೋಕುಲ ಮಿತ್ರಬಳಗದ ಕೆ.ಎಸ್.ಗಣೇಶ್ , ಕಿಲಾರಿಪೇಟೆ ಚಲಪತಿ , ಮುನಿವೆಂಕಟ್ , ಯತಿರಾಜ್ , ಖಾದಿಪುರ ಬಾಬು , ದಲಿತ್ ನಾರಾಯಣಸ್ವಾಮಿ , ಅಂಬೇಡ್ಕರ್ ನಗರ ಸೋಮಣ್ಣ , ಚಂದು , ಕೋಲಾರ ಕಿರಣ ಸಂಪಾದಕ ಮಹಮ್ಮದ್ ಚಾನ್ ಪಾಷಾ , ದಾನೇಶ್ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಗೋಕುಲ ಮಿತ್ರ ಬಳಗದ ವೇಣು ಇವರ ಹುಟ್ಟುಹಬ್ಬವನು ಆಚರಿಸಲಾಯಿತು. ಶ್ರೀನಲ್ಲೂರಮ್ಮ ಅನಾಥಾಶ್ರಮದ ಮುಖ್ಯಸ್ಥ ಭುವನೇಶ್ವರ್ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.