ಜಾಲ್ಸೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಜಾಲ್ಸೂರು ಸೆಕ್ಟರ್ ಅರ್ಧ ವಾರ್ಷಿಕ ರಿವ್ಯೂ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಸ್ವಾಲಿಹ್ ಹನೀಫಿ ಸುಣ್ಣಮೂಲೆಯವರ ಅಧ್ಯಕ್ಷತೆಯಲ್ಲಿ ಮೊಗರ್ಪಣೆ ಫಾತಿಮತುಝಹ್ರಾ ವಿಮೆನ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಡಿವಿಷನ್ ನಾಯಕರಾದ ರಫೀಖ್ ಅಮ್ಜದಿ ಇಂದ್ರಾಜೆಯವರು ಉದ್ಘಾಟಿಸಿದರು. ಡಿವಿಷನ್ ಕೋಶಾಧಿಕಾರಿ ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಸಂಘಟನಾ ತರಬೇತಿ ನೀಡಿದರು. ಪ್ರ. ಕಾರ್ಯದರ್ಶಿ ನಿಯಾಝ್ ಎಲಿಮಲೆ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಡಿವಿಷನ್ ಕಾರ್ಯದರ್ಶಿ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ ಮುಖ್ಯ ಅತಿಥಿಗಳಾಗಿದ್ದರು. ಕೊನೆಯಲ್ಲಿ ಮರಣಹೊಂದಿದ ನಾಯಕರು, ಕಾರ್ಯಕರ್ತರ ಹೆಸರಿನಲ್ಲಿ ಅನುಸ್ಮರಣೆ ನಡೆಸಿ ದುಆ ನಡೆಸಲಾಯಿತು. ಸಾಬಿತ್ ಫಾಳಿಲಿ ಎಲಿಮಲೆಯವರು ಸ್ವಾಗತಿಸಿ, ಉಮರ್ ಹನೀಫಿ ಜೀರ್ಮುಕ್ಕಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.