ಬಂಟ್ವಾಳ (www.vknews.com) : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೈಕಂಬ ವಲಯ ಹಾಗೂ ಪರ್ಲಿಯಾ ವಲಯದ ವತಿಯಿಂದ ಯನಪೋಯ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ರವಿವಾರ ಬಿ.ಸಿ ರೋಡಿನ ಶಾಂತಿಅಂಗಡಿಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಡ್ ಡೋನರ್ಸ್ ಫಾರಂ ಕೈಕಂಬ ವಲಯಾಧ್ಯಕ್ಷ ರಫೀಕ್ ಶಾಂತಿಅಂಗಡಿ ವಹಿಸಿದ್ದರು. ಯನಪೋಯ ಆಸ್ಪತ್ರೆಯ ವೈಧ್ಯೆ ಡಾ.ದೀಪಾ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಾಪ್ಯುಲರ್ ಪ್ರಂಟ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಅಬ್ದುಲ್ ಸಲೀಂ ಫರಂಗಿಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ ಗ್ರಾಮ ಮಟ್ಟದಲ್ಲಿ ರಕ್ತ ದಾನಿಗಳ ನೆಟ್ ವರ್ಕ್ ನ್ನು ಸ್ಥಾಪಿಸಿ ರಾಜ್ಯ ವ್ಯಾಪಿ ವಿಸ್ತರಿಸಿ ರಕ್ತದ ಅಗತ್ಯತೆಯನ್ನು ಶೀಘ್ರವಾಗಿ ಪೂರೈಸಲು ಸಹಕಾರಿಯಾಗಿ ದೊಡ್ಡ ಮಟ್ಟದಲ್ಲಿ ರಕ್ತ ಸಂಗ್ರಹಿಸುತ್ತಿರುವ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂನ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಮೊಹಿಯುದ್ದೀನ್ ಜುಮಾ ಮಸ್ಜಿದ್ ಮಿತ್ತಬೈಲ್ ಅಧ್ಯಕ್ಷರಾದ ಮುಹಮ್ಮದ್ ಸಾಗರ್ ಬ್ಲಡ್ ಡೋನರ್ಸ್ ಫಾರಂ ಪರ್ಲಿಯಾ ವಲಯ ಕಾರ್ಯದರ್ಶಿ ಸಫ್ವಾನ್ ಪರ್ಲಿಯಾ, ಎನ್.ಎಮ್.ಎಸ್ ಗೌರವಧ್ಯಕ್ಷ ಮುಹಮ್ಮದ್ ಮಜಲ್, ಎ.ಆರ್.ಎಫ್ ತಲಪಾಡಿ ಅಧ್ಯಕ್ಷ ಮುಸ್ತಾಕ್ ತಲಪಾಡಿ, ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಶನ್ ಶಾಂತಿಅಂಗಡಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಮಜಲ್, ಪಿ.ಎಫ್.ಐ ಬಿ.ಸಿ ರೋಡು ಡಿವಿಝನ್ ಅಧ್ಯಕ್ಷರಾದ ರಶೀದ್ ನಂದರಬೆಟ್ಟು, ಇಸ್ಮಾಯಿಲ್ ಶಾಂತಿಅಂಗಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ 70 ಯೂನಿಟ್ ರಕ್ತ ಸಂಗ್ರಹಿಸಲಾಯುತು.
ಈ ಸಂದರ್ಭದಲ್ಲಿ 2021 ನೇ ಸಾಲಿನ ಎಸ್.ಎಸ್.ಎಲ್.ಸಿ – ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತ ಸ್ಥಳಿಯ ವಿಧ್ಯಾರ್ಥಿನಿಗಳಾದ ಸಂಬ್ರೀನ ಹಾಗೂ ರೆಹ್ಯಾನತ್ ರವರನ್ನು ಹಾಗೂ ಸಮಾಜ ಸೇವಾ ಹಾಗೂ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಶಾಂತಿಅಂಗಡಿ ಅವರನ್ನು ಸನ್ಮಾನಿಸಲಾಯಿತು. ಅಶ್ರಫ್ ತಲಪಾಡಿ ಸ್ವಾಗತಿಸಿದರು. ಅನ್ವರ್ ಕೆ.ಎಚ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.