ಒಮಾನ್(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇರಳ ಜಂಹಿಯ್ಯತುಲ್ ಉಲಮಾ ಉಪಾಧ್ಯಕ್ಷರು, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಶರು,ಪ್ರಮುಖ ವಿದ್ವಾಂಸರು, ಹಲವು ಮೊಹಲ್ಲಾ ಗಳ ಖಾಝಿಯಾಗಿದ್ದ ಸೈಯ್ಯಿದುಲ್ ಉಮ್ಮಃ ಸೈಯ್ಯದ್ ಹೈದರ್ ಅಲೀ ಶಿಹಾಬ್ ತಂಙಳ್ ರವರು ಅಲ್ಪಕಾಲದ ಅನಾರೋಗ್ಯ ದಿಂದ ಬಳಲುತ್ತಿದ್ದು ಇಂದು ಅವರು ವಫಾತಾದರು.
ಕಾರುಣ್ಯ ಸೇವಗಳ ಮೂಲಕ ಜನಮನ್ನಣೆ ಗಳಿಸಿದ ಹಿರಿಯ ಪಂಡಿತಾ ಶಿರೋಮಣಿ ಅವರ ವಿಯೋಗವು ಸಮಾಜಕ್ಕೆ ಬಹಳ ನಷ್ಟವನ್ನುಂಟುಮಾಡಿದೆ ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಪತ್ರಿಕಾ ಮೂಲಕ ಸಂತಾಪ ಸೂಚಿಸಿರುತ್ತಾರೆ. ಸೈಯ್ಯದ್ ಹೈದರ್ ಅಲೀ ಶಿಹಾಬ್ ತಂಙಳ್ ರವರ ಮಗ್ಫಿರತ್ಗೆ ಬೇಕಾಗಿ ಪ್ರಾರ್ಥನೆ ಮಾಡಿ ಮತ್ತು ಝಿಕ್ರ್ ಹೇಳಿ ಸಹಕರಿಸ ಬೇಕಾಗಿ ಕೆಸಿಎಫ್ ಸರ್ವ ಸದಸ್ಯರಲ್ಲಿ ವಿನಂತಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.