ಕೋಲಾರ (ವಿಶ್ವಕನ್ನಡಿಗ ನ್ಯೂಸ್): ನಗರದ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್ ಕುಮಾರ್ , ಸುಕನ್ಯಾ ದಂಪತಿಗಳ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು , ಬಂಕರ್ಗಳು , ಮೆಟ್ರೋ ನಿಲ್ದಾಣಗಳಲ್ಲಿ ನಾವು ತಂಗಿದ್ದೆವು , ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಯಿತು . ನಾವಿದ್ದ ಹಾಸ್ಟೆಲ್ಗೂ ಭಾರತದ ಧ್ವಜ ಕಟ್ಟಿದ್ದು , ಧ್ವಜ ಹಿಡಿದೇ ಗಡಿ ತಲುಪಿದ್ದು ನಮಗೆ ನೆರವಾಯಿತು ಎಂದರು. ಉಕ್ರೇನ್ನೊಳಗೆ ನಮ್ಮ ಭಾರತದ ವಿಮಾನಗಳು ಬರುವ ಹಾಗಿರಲಿಲ್ಲ , ಯುದ್ಧ ಭೀತಿ ಹಾಗೂ ವಿಮಾನ ನಿಲ್ದಾಣಗಳು ಧ್ವಂಸಗೊಂಡಿದ್ದವು , ಕಷ್ಟಪಟ್ಟು ಗಡಿ ತಲುಪುವಂತೆ ನಮ್ಮ ರಾಯಭಾರ ಕಚೇರಿ ನಿರ್ದೇಶನ ನೀಡಿತ್ತು . ರೈಲುಗಳಲ್ಲಿ ಬರುವಾಗಲೂ ಅಲ್ಲಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದರಿಂದ ಪ್ರಾರ್ಥನೆ ಮಾಡಿಕೊಂಡು ಬಂದು ಗಡಿ ತಲುಪಿದೆವು ಎ೦ದರು.
ಗಡಿಯಿಂದ ನಮ್ಮ ಭಾರತೀಯ ರಾಯಭಾರ ಸಿಬ್ಬಂದಿ ನಮ್ಮನ್ನು ಅತ್ಯಂತ ಉತ್ತಮ ರೀತಿಯಲ್ಲಿ ನೋಡಿಕೊಂಡರು ನಾವಿಂದು ಬದುಕಿ ಬಂದಿದ್ದೇವೆ ಎಂಬುದೇ ಅತಿಹೆಚ್ಚ ಸಂತಸ , ಭಾರತ ಸರ್ಕಾರ , ರಾಜಭಾರ ಕಚೇರಿಗೆ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.