ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್) : ಅವಲಕುಪ್ಪ ಗ್ರಾಮದಲ್ಲಿ ವಾಸ್ತು ದೋಷ ನಿವಾರಿಸಲು ಚಕ್ರ ಸ್ಥಾಪನೆ , ಕಳಶಗಳ ಪೂಜೆ , ಅಷ್ಟಬಂದನ , ಅಗ್ನಿಕುಂಡ , ಹೋಮ , ಮುಂತಾದ ಪೂಜಾಕಾರ್ಯಕ್ರಮಗಳನ್ನು ಗಾಮದ ಜನತೆಯ ಕಲ್ಯಾಣಾರ್ಥಕ್ಕಾಗಿ ರಾಯಲ್ಪಾಡಿನ ವಾಸ್ತುದೋಷ ವಾಸ್ತುದೋಷ ನಿವಾರಣಾ ಪರಿಣಿತರಾದ ವಿಶ್ವನಾಥ ಶಾಸ್ತ್ರಿ ತಂಡದವರು ನಡೆಸಿಕೊಟ್ಟಿದ್ದರು .
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಅವಲಕುಪ್ಪ ಗ್ರಾಮದಲ್ಲಿ ೨ ೩ ವರ್ಷಗಳಿಂದ ಅನೇಕ ಪ್ರಾಣನಷ್ಟಗಳು ಸಂಭವಿಸಿದ್ದು .
ಈ ಅನಾಹುತವನ್ನು ತಪ್ಪಿಸಲು ಗಾಮಸ್ಥರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಲು ರಾಯಲಾಡ್ನ ಸುಪಸಿದ್ದ ವಾಸ್ತುದೋಷ ಪರಿಣಿತರಾದ ಶ್ರೀ ವೆಲ್ಲಾಲ ಸತ್ಯನಾರಾಯಣಸ್ವಾಮಿ ಇವರ ಸಲಹೆ ಮಾರ್ಗ ದರ್ಶನದಲ್ಲಿ ಗಾಮದ ಸುತ್ತಲು ಅಷ್ಟ ಬಂದನ ಏರ್ಪಡಿಸಿ ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ಏಕಕಾಲದಲ್ಲಿ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿ ಸಾಂಪ್ರದಾಯದಂತೆ.
ಗ್ರಾಮದ ಮಹಾದ್ವಾರದಲ್ಲಿ ಪೂರ್ವಿಕರ ಅಡಿಪಾಯದಂತೆ ಮದ್ಯದಲ್ಲಿ ಚಕ್ರ ಸ್ಥಾಪನೆ , ಕಳಶಗಳಪೂಜಿ , ಅಗ್ನಿಕುಂಡ , ಹೋಮ , ಗೋಪೂಜೆ ಇನ್ನಿತರ ಪೂಜಾಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಿ ೪೮ ದಿನಗಳ ಕಾಲ ಗಾಮದಲ್ಲಿ ಶದ ನಿಷ್ಠೆ ಭಕ್ತಿಯಿಂದ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿದಾಗ ಎಲ್ಲಾ ಪೂಜಾಕಾರ್ಯಕ್ರಮಗಳ ಫಲ ಲಭಿಸಿ ಗ್ರಾಮದಲ್ಲಿ ಶಾಂತಿ ಆರೋಗ್ಯ ಆಯಸ್ಸು ವೃದಿಯಾಗಿ ನಿಮಗೆ ಗ್ರಾಮ ದೇವರುಗಳ ರಕ್ಷಣೆ ಆಶೀರ್ಪಾದ ಲಭಿಸುತ್ತದೆ ಎಂದು ವಿಶ್ವನಾಥ್ ಶಾಸ್ತ್ರಿಯವರು ತಿಳಿಸಿದ್ದಾರೆ .
ಈ ಪೂಜಾ ಕಾರ್ಯಕ್ರಮಗಳಲ್ಲಿ ಮೊದಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೀತಾ ರಾಮಚಂದ್ರ , ರಾಯಲ್ಪಾಡ್ನ ಸಿಮೆಂಟ್ ನಾರಾಯಣಸ್ವಾಮಿ , ಸದಸ್ಯ ಗೋವಿಂದರೆಡ್ಡಿ , ಮಾಜಿ ಗ್ರಾಪಂ ಸದಸ್ಯರಾದ ಮುನಿಯಪ್ಪ , ಮುನಿರತ್ನಂ , ಗ್ರಾಮದ ಪ್ರಮುಖರಾದ ಬಿ . ನಾರಾಯಣಸ್ವಾಮಿ , ಮುನಿರೆಡ್ಡಿ , ವಿ . ಬೈರೆಡ್ಡಿ , ವಿ . ನಾರಾಯಣಸ್ವಾಮಿ , ಹನುಮಂತಪ್ಪ , ಎನ್ . ಮಂಜುನಾಥರೆಡ್ಡಿ , ಮುರಳಿ , ನರಸಿಂಹ , ಇನ್ನೂ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.