ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮರ್ಕಝ್ ನೋಲೇಜ್ ಸಿಟಿ ಉದ್ಘಾಟನೆಯು ಅಕ್ಟೋಬರ್ ಕೊನೆಯ ವಾರದಲ್ಲಿ ಉದ್ಘಾಟನೆ ಗೊಳ್ಳಲಿದ್ದು ಮಸ್ಜಿದೇ ಆಸಾರ್ ನ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಈ ಸಂಬಂಧ ಮರ್ಕಝ್ ನೋಲೇಜ್ ಸಿಟಿ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜಿಲ್ಲೆಯ 13ಕೇಂದ್ರಗಳಲ್ಲಿ ಮರ್ಕಝ್ ಸರ್ಕಲ್ ಸಮಾವೇಶ ಹಾಗೂ ಮಸೀದಿ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಭಾಗವಹಿಸುವವರಿಗಾಗಿ ಅವಕಾಶ ನೀಡಲಾಗಿದ್ಥು ಮನೆಗೊಂದು ಮುಸಲ್ಲಾ ಅಭಿಯಾನ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 9 ರ ವರೆಗೆ ನಡೆಸಲು ಇಂದು ಮಂಗಳೂರಿನ ಅಡ್ಯಾರ್ ಕಣ್ಣೂರು ಸುನ್ನೀ ಸೆಂಟರ್ ನಲ್ಲಿ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮರ್ಕಝ್ ನೋಲೇಜ್ ಸಿಟಿಯು ಶಿಕ್ಷಣ ಮತ್ತು ಸಂಸ್ಕೃತಿಯ ಕ್ರಾಂತಿಕಾರಿ ಹೆಜ್ಜೆ ಯಾಗಿದ್ದು ಸಮಾರು 150 ಹೆಕ್ಟೇರು ಗಳಲ್ಲಿ ಕಾರ್ಯಾಚರಿಸುತ್ತದೆ.
ಸಭೆಯಲ್ಲಿ ಮರ್ಕಝ್ ನೋಲೇಜ್ ಸಿಟಿ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು ಉದ್ಘಾಟಿಸಿದರು.
ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಮಾತನಾಡಿದರು. ಮರ್ಕಝ್ ಕೈಕಂಬದ ಬದ್ರುದ್ದೀನ್ ಅಝ್ಹರಿ ಬಡಕಬೈಲು, ಉಳ್ಳಾಲ ಹನೀಫ್ ಹಾಜಿ,ಇಬ್ರಾಹಿಮ್ ಸಖಾಫಿ ಸೆರ್ಕಳ, ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು,ಅಬ್ದುಲ್ ಮುತ್ತಲಿಬ್ ಮೂಡಬಿದ್ರೆ ಮುಂತಾದವರು ಭಾಗವಹಿಸಿದ್ದರು. ಜನರಲ್ ಕನ್ವೀನರ್ ಅಶ್ರಫ್ ಕಿನಾರ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.