ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಅಥವ ರಾಹುಲ್ ಗಾಂಧಿಯೇ ಸ್ಪರ್ಧೆ ಮಾಡಲಿ ಜನ ನನ್ನೊಂದಿಗೆ ಇದ್ದಾರೆ , 50 ಸಾವಿರ ಮತಗಳ ಅಂತರದಿಂದ ನನ್ನ ಗೆಲುವು ಶತಸಿದ್ಧ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಘೋಷಿಸಿದರು .
ಇದೇ ತಿಂಗಳು 9 ರಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಕೋಲಾರಕ್ಕೆ ಆಗಮಿಸು ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಕೋಗಿಲ ಹಳ್ಳಿ ನಿವಾಸದ ಬಳಿ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅನಿಸಿಕೆಗಳನ್ನು ಪಡೆದು ಅವರು ಮಾತನಾಡುತಿದ್ದರು. ಸಿದ್ದರಾಮಯ್ಯನವರು ಬ೦ದರೆ ಗೆಲುವಿನ ಅಂತರ 10 ಸಾವಿರ ಮತಗಳು ಕಡಿಮೆಯಾಗ ಬಹುದು ಅಷ್ಟೇ ವಿನಹ ಬೇರೇನು ಆಗುವುದಿಲ್ಲ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ವಿಶ್ವಾಸ ವ್ಯಕ್ತ ಪಡಿಸಿದರು.
ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರಕ್ಕೆ ಬಂದರೆ ಬೇರೆ ಬೇರೆ ಪಕ್ಷದ ನಾಯಕರು ನನಗೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡದೆ ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.ನನಗೆ ಎರಡು ದಿನಗಳಿಂದ ಕೋಲಾರದ ಕಾಂಗ್ರೆಸ್ನ ಪ್ರಮುಖ ಮುಖಂಡರೊಬ್ಬರು ನನ್ನ ಸಂಪರ್ಕದಲ್ಲಿ ಇದ್ದು, ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದರೆ ನಿನ್ನ ಗೆಲುವು ಗ್ಯಾರಂಟಿ ಅಂತ ಹೇಳಿದ್ದಾರೆ.
ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಕರೆಗಳು ಬರುತ್ತಿದ್ದು ನನಗೆ ಎಲ್ಲಾ ಪಕ್ಷದ ಮುಖಂಡರು ಕೋಲಾರಕ್ಕೆ ಬಂದು ನನ್ನನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು. ಕಾರ್ಯಕರ್ತರು ಒಪ್ಪಿದರೆ ಸೋಮವಾರದಂದು ಶ್ರೀರಾಮೋತ್ಸವ ಕಾರ್ಯಕ್ರಮ ಮಾಡಿ ಸಿದ್ದರಾಮಯ್ಯನವರಿಗೆ ನಮ್ಮ ತಾಕತ್ತು ಏನೆಂದು ತೋರಿಸೋಣ.
ಕೋಲಾರದಲ್ಲಿ ಮುಸ್ಲಿಂ ಬಾಂಧವರು ಈ ಬಾರಿ ನನಗೆ ಮತ ಚಲಾವಣೆ ಮಾಡುತ್ತಾರೆ ಮುಸ್ಲಿಂ ಬಾಂಧವರು ನನಗೆ ಭರವಸೆ ಕೊಟ್ಟಿದ್ದಾರೆ. ನಾವು ಈ ಬಾರಿ ಪಕ್ಷ ನೋಡದೆ ಅಭಿವೃದ್ಧಿಪರ ಮತ ಹಾಕುತ್ತೇವೆ ಎಂದು ಹೇಳಿದ್ದಾ ರೆಂದು ತಿಳಿಸಿದರು.
ಮಾರ್ಚ್ನಲ್ಲಿ ಒಂದು ಲಕ್ಷ ಕಾರ್ಯಕರ್ತರು ಸೇರಿ ಅದ್ದೂರಿ ಕಾರ್ಯಕ್ರಮ ಮಾಡಿ ಅಮಿತ್ ಷಾ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸೋಣ. ನರೇಂದ್ರ ಮೋದಿ ಅಭಿವೃದ್ಧಿ ಕೆಲಸಗಳು ಬಸವರಾಜಬೊಮ್ಮಾಯಿ ಅವರ ಜನಪ್ರಿಯ ಯೋಜನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ವಿವರಿಸಿದರು .
ಕಾರ್ಯಕ್ರಮದಲ್ಲಿ ಬೆಗ್ಲಿ ಸೂರ್ಯ ಪ್ರಕಾಶ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್ , ಬಂಕ್ ಮಂಜುನಾಥ್ , ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ , ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ , ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ , ಹಾಗೂ ಅನೇಕ ಬಿ.ಜೆ.ಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.