ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್): ಅವರೆಕಾಯಿ ವಹಿವಾಟನ್ನು ನಗರದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಅವರೆಕಾಯಿ ಸಮೇತ ಪ್ರತಿಭಟನೆ ನಡೆಸಿ , ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಭೂಮಿಗೆ ಬೀಜ ಹಾಕಿ 90 ದಿನ ಮಳೆ , ಗಾಳಿ , ಚಳಿ ಎನ್ನದೆ ಬೆಳೆದ ಬೆಳೆಯನ್ನು ಮಾರುಕಟ್ಟೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ನಿರೀಕ್ಷೆಯಲ್ಲಿರುವ ರೀತಿ ಮಾರಾಟ ರೈತರಿಗೆ ಪರವಾನಗಿ ಪಡೆದಿರುವ ದಲ್ಲಾಳಿಗಳು ತಮಗೆ ಇಷ್ಟ ಬಂದ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ನಾಪತ್ತೆಯಾಗಿರುವುದು ಹಗರಣಗಳಿಗೆ ಕಾರಣವಾಗಿದೆ ಅವ್ಯವಸ್ಥೆಯ ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.
ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಷರತ್ತುಬದ್ಧ ಪರವಾನಗಿಯನ್ನು ಪಡೆದಿರುವ ಮಂಡಿ ಮಾಲೀಕರು ಪ್ರತಿ ವರ್ಷ ಅವರೆಕಾಯಿ ಅವಕ ಪ್ರಾರಂಭವಾದಾಗ ನಗರದ ಪ್ರಮುಖ ರಸ್ತೆಗಳಲ್ಲಿ ತಮಗಿಷ್ಟ ಬಂದ ರೀತಿ ಹರಾಜು ಪ್ರಕ್ರಿಯೆ ಮಾಡುವ ಮುಖಾಂತರ ರೈತರ ಕಷ್ಟದ ಬೆಳೆಗೆ ತಕ್ಕ ಬೆಲೆ ನೀಡದೆ ತಮಗಿಷ್ಟ ಬಂದ ರೀತಿ ಹರಾಜು ಹಾಕಿ ರೈತರಿಂದ ಕಾನೂನು ಬಾಹಿರ ಕಮೀಷನ್ ಪಡೆಯುವ ಜೊತೆಗೆ ಮಾರುಕಟ್ಟೆಗೆ ಬರುವ ಶುಲ್ಕವನ್ನು ವಂಚನೆ ಮಾಡುತ್ತಿದ್ದರೂ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.
ಪರವಾನಗಿ ಎಲ್ಲಿ ಬೇಕಾದರೂ ಮಾರಾಟ ಪಡೆದರೆ ಮಾಡಬಹುದೇ ? ಹಾಗಾದರೆ ರೈತರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ನೀಡಬಹುದಲ್ಲವೇ. ಸ್ಥಳದಲ್ಲಿ ರೈತರೇನಾದರೂ ಸಾರ್ವಜನಿಕ ಮಾರಾಟ ಮಾಡಿದರೆ ನೂರೊಂದು ನಿಯಮ ಹೇಳುವ ಅಧಿಕಾರಿಗಳಿಗೆ ಮಂಡಿ ಮಾಲೀಕರ ಹಗಲು ದರೋಡೆ ಕಾಣಿಸುತ್ತಿಲ್ಲವೇ ಎಂದು ಅಸಮಧಾನ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಮಾತನಾಡಿ , ಬರುವಂತೆ ಕೆ.ನಾರಾಯಣಗೌಡ ಮಾರುಕಟ್ಟೆಗೆ ಆದಾಯ ಅವರೆಕಾಯಿ ವಹಿವಾಟನ್ನು ಮಾರುಕಟ್ಟೆಯಲ್ಲಿ ನಡೆಸಿ , ಬೇಕಾದವರು ಮಾರುಕಟ್ಟೆಗೆ ಬಂದು ಖರೀದಿ ಮಾಡುತ್ತಾರೆ. ಅದನ್ನು ಬಿಟ್ಟು ಇಂತಹ ಕಾನೂನು ಬಾಹಿರ ವಹಿವಾಟು ನಡೆಸುವಾಗ ರೈತರಿಗೆ ಮಂಡಿ ಮಾಲೀಕರಿಂದ ತೊಂದರೆಯಾದರೆ ಯಾರಿಗೆ ನಮ್ಮ ಸಮಸ್ಯೆ ಬಗ್ಗೆ ದೂರು ನೀಡಬೇಕು ಎಂದು ಪ್ರಶ್ನಿಸಿದರು.
ಅವರೆಕಾಯಿ ಅವಕದಿಂದ ಸಂಚಾರ ದಟ್ಟಣೆ ಜೊತೆಗೆ ಮಾರುಕಟ್ಟೆ ಶುಲ್ಕ ರೈತರಿಗೆ ವಂಚನೆ ತಪ್ಪಿಸಲು ನಗರದಲ್ಲಿ ವಹಿವಾಟು ನಡೆಸುತ್ತಿರುವ ಮಂಡಿ ಮಾಲೀಕರಿಗೆ ನೋಟೀಸ್ ನೀಡಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ,ಹಾಗೂ ಮಾವು ಟೊಮೇಟೊ ಅವಕ ಪ್ರಾರಂಭಕ್ಕೆ ಮುನ್ನ ಬದುಕು ಕಟ್ಟಿಕೊಳ್ಳಲು ಕಾರ್ಮಿಕರ ಬರುವ ಮಾರುಕಟ್ಟೆಗೆ ಆರೋಗ್ಯದ ದೃಷ್ಠಿಯಿಂದ ಕುಡಿಯುವ ನೀರು ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುಖಾಂತರ ಆರೋಗ್ಯ ಹಾಗೂ ಪರಿಸರ ಕಾಪಾಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಅವರು , ಅವರೆಕಾಯಿ ವಹಿವಾಟು ನಗರದಲ್ಲಿ ನಡೆಯುತ್ತಿರುವ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಂಡಿ ಮಾಲೀಕರಿಗೆ ನೋಟೀಸ್ ನೀಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಂಜುನಾಥ್ , ನಳಿನಿಗೌಡ , ಆಂಜಿನಪ ಶಿವ , ಷೇಕ್ ಈಕಂಬಳ್ಳಿ ಜಿಲ್ಲಾಧ್ಯಕ್ಷೆ ತಾಲೂಕು ಅಧ್ಯಕ್ಷ ತೆರಹಳ್ಳಿ ಆಲವಾಟ ಜಿಲ್ಲಾಧ್ಯಕ್ಷ ಮಹಿಳಾ ಮುನಿರಾಜು , ಶಫೀಉಲ್ಲಾ , ಸಹದೇವಣ್ಣ , ಮಂಗಸಂದ್ರ ತಿಮ್ಮಣ , ಸಂತೊಷ್ , ಆಚಂಪಲ್ಲಿ ಗಂಗಾಧರ್ , ತರಹಳ್ಳಿ ಆಂಜಿನಪ್ಪ , ಕೋಟೆ ಶ್ರೀನಿವಾಸ್ , ಮಂಜುಳಮ್ಮ , ವೆಂಕಟ್ , ಪಾರುಕ್ ಪಾಷ , ಬಂಗಾರಿ ಮಂಜು , ಅದಿಲ್ಪಾಷ , ಜುಬೆರ್ ಪಾಷ , ವಿಜಯ್ಪಾಲ್ , ಭಾಸ್ಕರ್ ಮುಂತಾದವರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.