ತುರ್ಕಳಿಕೆ(ವಿಶ್ವಕನ್ನಡಿಗ ನ್ಯೂಸ್): ಖಲಂದರೀಯ ಮಸೀದಿ ಮತ್ತು ನೂರಾನಿಯ ಮದ್ರಸ ಬದ್ಯಾರ್ ತುರ್ಕಳಿಕೆ ಇದರ ಗಲ್ಫ್ ಸಮಿತಿಯಾದ ಎನ್ ಎಂ ಬಿ ಗಲ್ಫ್ ಸಮಿತಿಯ ಮಹಾಸಭೆಯು ಗೌರವಧ್ಯಕ್ಷರಾದ ಸುಲೈಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆನ್ಲೈನ್ ನಲ್ಲಿ ನಡೆಯಿತು.
ಅಬ್ಬಾಸ್ ಸಅದಿಯವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ಶರೀಫ್ ಸಅದಿ ಖಿರಾಅತ್ ಪಠಿಸಿ ನಿಝಾಮ್ ಬದ್ಯಾರ್ ಉಧ್ಘಾಟಿಸಿದರು. ಕಾರ್ಯದರ್ಶಿಯವರ ವರದಿ ಹಾಗೂ ಲೆಕ್ಕಮಂಡನೆಯ ಬಳಿಕ ಹಳೆಯ ಸಮಿತಿಯನ್ನು ಅನೂರ್ಜಿತಗೊಳಿಸಿ ಅಬ್ಬಾಸ್ ಸಅದಿ ಹಾಗೂ ರಫೀಕ್ ದಮ್ಮಾಂ ರವರ ನೇತ್ರತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
2023-2024 ರ ನೂತನ ಸಮಿತಿಯ ವಿವರ:- ಗೌರವಾಧ್ಯಕ್ಷರು: ಕಾಸಿಂ ಮುಸ್ಲಿಯಾರ್ ಒಡ್ಡತಟ್ಟ ಸಲಹೆಗಾರರು:ಸುಲೈಮಾನ್ ಸಖಾಫಿ ಬದ್ಯಾರ್ . ಅಬ್ಬಾಸ್ ಸಅದಿ . ರಫೀಕ್ ದಮ್ಮಾಂ. ಸಿರಾಜ್ ಬಿಯಂ. ಇಬ್ರಾಹಿಂ ಮೈದಾನಿ . ಅಧ್ಯಕ್ಷರು: ರಫೀಕ್ ಬದ್ಯಾರ್ ಮದೀನ ಉಪಾಧ್ಯಕ್ಷರು: ಇರ್ಶಾದ್ ಉಜಿರೆಬೆಟ್ಟು ನಿಜಾಂ ಬದ್ಯಾರು ಕಾರ್ಯದರ್ಶಿ: ಶಮೀರ್ ಬದ್ಯಾರ್ ಜೊತೆ ಕಾರ್ಯದರ್ಶಿ : ಝುಬೈರ್ ನೀಲಗಿರಿ ಶರೀಫ್ ಒಡ್ಡತಟ್ಟ ಕೋಶಾಧಿಕಾರಿ : ಶರೀಫ್ ಬದ್ಯಾರ್ ಸಂಘಟನೆ ಕಾರ್ಯದರ್ಶಿ: ಹಾರಿಸ್ ಬದ್ಯಾರ್ ಕೊ ಆರ್ಡಿನೇಟರ್: ಇಬ್ರಾಹಿಂ ಅಶ್ರಫಿ ಬದ್ಯಾರ್.
ಕಾರ್ಯಕ್ರಮದ ಕೊನೆಯಲ್ಲಿ ಝುಬೈರ್ ನೀಲಗಿರಿ ವಂದಿಸಿ ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.