ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಕೇರಳದ ತಿರುವನಂತಪುರದಿಂದ ಹೊರಟು 11 ದೇಶಗಳನ್ನು ದಾಟಿ ಈಜಿಪ್ಟಿನ ಕೈರೋ ಗೆ ಸೈಕಲ್ ನಲ್ಲಿ ಪ್ರಯಾಣಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 21 ವರ್ಷದ ಯುವಕ ಹಾಫಿಳ್ ಸಾಬಿತ್(solo rider) ರವರನ್ನು ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಸಮಿತಿ ಅಧ್ಯಕ್ಷರಾದ ಶಹೀರ್ ಹುದವಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಾಫಿಳ್ ಝೈನ್ ಸಖಾಫಿ ಉಳ್ಳಾಲ ಉದ್ಘಾಟಿಸಿ ,ಜನಾಬ್ ಹನೀಫ್ ಅರಿಯಮೂಲೆ ಮತ್ತು ಅಬ್ದುಲ್ ಅಝೀಝ್ ಪೆರ್ಮುಡೆ ಶುಭ ಹಾರೈಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಬಿತ್ ಬೈರಿಕಟ್ಟೆ ಈಜಿಪ್ಟಿನ ಅಲ್- ಅಝರ್ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಪಡೆಯಲು ಕೇರಳದ ತಿರುವನಂತಪುರದಿಂದ ಸೈಕಲ್ ಪ್ರಯಾಣ ಆರಂಭಿಸಿ ಪವಿತ್ರ ಸ್ಥಳಗಳಾದ ಮಕ್ಕಾ ಮತ್ತು ಮದೀನಾ ಭೇಟಿ ನೀಡಿ ಉಮ್ರಾ ನಿರ್ವಹಿಸುವ ಗುರಿಯನ್ನು ಹೊಂದಿರುದಾಗಿ ತಿಳಿಸಿದರು. ಕೊರೋನ ಸಂದರ್ಭದಲ್ಲಿ ಕೇರಳದಾದ್ಯಂತ ಸೈಕಲ್ ಯಾತ್ರೆ ಮಾಡಿರುವ ಅನುಭವ ಹೊಂದಿರೂದಾಗಿ ತನ್ನ ಯಾತ್ರೆಯ ಅನುಭವವನ್ನು ವಿವರಿಸಿ ಅವರು ಇದು ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಯಾತ್ರೆಯಾಗಿದ್ದು ಹಲವಾರು ವಿಷಯವನ್ನು ತಿಳಿಯಲು ಸಾಧ್ಯವಾಯಿತೆಂದು ಹೇಳಿದರು ನಮಗೆ ಒಂದು ಕಾರ್ಯವನ್ನು ಸಾಧಿಸಬೇಕೆಂಬ ಛಲ ಇದ್ದರೆ ನೂರಾರು ಅಡೆ ತಡೆಗಳನ್ನು ಎದುರಿಸಿ ಗುರಿ ಮುಟ್ಟಲು ಸಾಧ್ಯ ಹಾಗೆಯೇ ನಮಗೆ ದೃಢ ನಿರ್ಧಾರದ ಕೊರತೆ ಇದ್ದರೆ ಸಾವಿರಾರು ಮಾರ್ಗಗಳು ಇದ್ದರೂ ಕೂಡ ಗುರಿ ಮುಟ್ಟಲು ಅಸಾಧ್ಯ ಎಂದು ತಮ್ಮ ಸ್ಪೂರ್ತಿದಾಯಕ ಮಾತಿನಲ್ಲಿ ತಿಳಿಸಿದರು .
ಸಾಬಿತ್ ರವರ ಪ್ರಯಾಣ ಮತ್ತು ಉದ್ದೇಶ ಯಶಸ್ವಿಯಾಗಲು ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುದಾಭಿ ಸಮಿತಿಯ ಸದಸ್ಯರು ದುವಾ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿ , ಜನಾಬ್ ಶಾಫಿ ಪೆರುವಾಯಿ ಧನ್ಯವಾದ ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.