ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಬಕ್ರೀದ್ ಹಬ್ಬದ ದಿನದಂದು ಸ್ವೀಡನ್ ನಲ್ಲಿ ಪವಿತ್ರ ಕುರ್ಆನ್ ಅನ್ನು ಸಾರ್ವಜನಿಕವಾಗಿ ಸುಟ್ಟ ಪ್ರಕರಣವನ್ನು ಸಂಬಂಧಿಸಿ ಸ್ವೀಡನ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸುಲ್ತಾನತ್ ಓಫ್ ಒಮಾನಿನ ಗ್ರ್ಯಾಂಡ್ ಮುಫ್ತಿ ಶೇಖ್ ಅಹ್ಮದ್ ಬಿನ್ ಹಮದ್ ಅಲ್ ಖಲೀಲಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಟ್ವಿಟರ್ನಲ್ಲಿ ತಮ್ಮ ಅಧಿಕೃತ ಖಾತೆಯ ಮೂಲಕ, “ಮುಸ್ಲಿಂ ಮಕ್ಕಳನ್ನು ಅವರ ಕುಟುಂಬದಿಂದ ಬಲವಂತವಾಗಿ ದೂರಮಾಡಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಸ್ವೀಡನ್ ಇಡೀ ಇಸ್ಲಾಮಿಕ್ ರಾಷ್ಟ್ರಕ್ಕೆ ದೊಡ್ಡ ಸವಾಲನ್ನು ಕೈಗೊಂಡಿದೆ, ಈದುಲ್ ಅಧ್ಸ್ಹಾ ದಿನದಂದು ಪವಿತ್ರ ಕುರಾನ್ ಅನ್ನು ಸಾರ್ವಜನಿಕವಾಗಿ ಸುಡಲು ಅವಕಾಶ ನೀಡಿರುವುದು ಮತ್ತು ಭದ್ರತಾ ಸಿಬ್ಬಂದಿಗಳು ಅವನನ್ನು ರಕ್ಷಿಸಿರುವುದು ಕಂಡುಬಂದಿದೆ.
ಇದಕ್ಕೆ ನಾವು ತೆಗೆಯಬೇಕಾದ ಕನಿಷ್ಟಪಕ್ಷ ಆ ದೇಶ ಮತ್ತು ಯಾವುದೇ ಇಸ್ಲಾಮಿಕ್ ರಾಷ್ಟ್ರದ ನಡುವೆ ನಡೆಯುವ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಹಾಗೂ ಅವರ ಎಲ್ಲಾ ಉತ್ಪನ್ನಗಳನ್ನು ಖರೀದಿಸುವುದನ್ನು ನಿರಾಕರಿಸುವ ಮೂಲಕ ಸ್ವೀಡನ್ ನ್ನನ ಸಂಪೂರ್ಣವಾಗಿ ಬಹಿಷ್ಕರಿಸಬೇಕಾಗಿದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.