ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸಿದ್ದರಾಮಯ್ಯ ಸರ್ಕಾರದ 2023-24ರ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ 37ಸಾವಿರ ಕೋಟಿಯ ಯೋಜನೆ ರೂಪಿಸಿದ್ದು ಅಭಿನಂದನಾರ್ಹ . ಪ್ರತ್ಯೇಕವಾಗಿ ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕವಾಗಿ ಮೇಲಕ್ಕೆತ್ತುವ ಹಲವು ಯೋಜನೆಗಳು ಆಯವ್ಯಯದಲ್ಲಿ ಕಾಣುತ್ತಿದ್ದು, ಪ್ರತ್ಯೇಕವಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮುಂದುವರಿಕೆ, ಶೈಕ್ಷಣಿಕ ಸಾಲ, ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳ ಅಭಿವೃದ್ದಿ , ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತೇಜನ ನೀಡುವ ಯೋಜನೆ ಈ ರೀತಿ ಮುಸ್ಲಿಂ ಸಮುದಾಯದ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ದಾರಿದೀಪಗಳಾಗುವ ಯೋಜನೆಗಳಾಗಿದ್ದು, ಶೂನ್ಯ ಬಡ್ಡಿ ದರದಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಿರುವ ಸಾಲ, ಶಾದಿ ಮಹಲ್ ಯೋಜನೆ ಮರು ಸ್ಥಾಪನೆ, ಈ ರೀತಿ ಸರ್ಕಾರದ ನೂತನ ಆಯವ್ಯಯದ ನಿರ್ಧಾರಗಳು ಬಹಳಷ್ಟು ಆಶಾಭಾವನೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಮೂಡಿಸಿದೆಯೆಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಹೇಳಿದರು.
ಈ ಯೋಜನೆಗಳು ಪರಿಣಾಮಕಾರಿಯಾಗಿ ತಳಮಟ್ಟದವರೆಗೆ ಸಮುದಾಯ ಭಾಂದವರಿಗೆ ತಲುಪಲು ನೀತಿಗಳು ರೂಪಿಸಿ ಅಧಿಕಾರಿಗಳು, ಸಮುದಾಯ ಸಂಘಟನೆಗಳು ಪರಿಣಾಮಕಾರಿಯಾಗಿ ಕಾರ್ಯಾಚರಿಸುವಂತೆಯೂ ಇದೇ ಸಂದರ್ಭ ಕರೆ ನೀಡಿದರು. ಸರ್ಕಾರವು ಎಲ್ಲಾ ಸಮುದಾಯಗಳಿಗೆ ಅನುಕೂಲವಾಗುವ ರೀತಿಯ ಯೋಜನೆಗಳು ಪ್ರಸ್ತುತ ಆಯವ್ಯಯದಲ್ಲಿ ಒಳಗೊಂಡಿತ್ತು ರಾಜ್ಯದ ಸರ್ವತ್ತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಿ ಜನರ ತಲಾ ಆದಾಯ ಉಳಿತಾಯ ಗಳಿಗೆ ರಾಜ್ಯದ ಆಯವ್ಯಯ ಶಕ್ತಿ ತುಂಬಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಪರವಾಗಿ ಅಭಿನಂದಿಸುವುದಾಗಿ ಹೇಳಿಕೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.