ಜಗಳೂರು(ವಿಶ್ವಕನ್ನಡಿಗ ನ್ಯೂಸ್): ಮಾಝಿನ್ ಹೆರಿಟೇಜ್ ವಾರ್ಷಿಕೋತ್ವವ ಹಾಗೂ ದಾವಣಗೆರೆ – ಜ್ಯೋತಿಪುರ ಮರ್ಜಾನ್ ಮದ್ರಸ ಉದ್ಘಾಟನೆ ಕಾರ್ಯಕ್ರಮವು ನಾಳೆ ದಿನಾಂಕ 13/07/2023 ರಂದು ನಡೆಯಲಿದೆ.
ಒಂದು ವರ್ಷದ ಹಿಂದೆ ಕೆಸಿಎಫ್ ಒಮಾನ್ ಪ್ರಾಯೋಜಕತ್ವದಲ್ಲಿ ಇಹ್ಸಾನ್ ಕರ್ನಾಟಕ ಮೂಲಕ ಸಮುದಾಯಕ್ಕೆ ಸಮರ್ಪಿಸಿದ ಮಾಝಿನ್ ಹೆರಿಟೇಜ್ ಇದರ ವಾರ್ಷಿಕೋತ್ವವ ಹಾಗೂ ಕೆಸಿಎಫ್ ಒಮಾನ್ ಸೀಬ್ ಝೋನ್ ಪ್ರಾಯೋಜಕತ್ವದಲ್ಲಿ ದಾವಣಗೆರೆಯ ಜ್ಯೋತಿಪುರದಲ್ಲಿ ನಿರ್ಮಿಸಿದ ಮರ್ಜಾನ್ ಮದ್ರಸವು ನಾಳೆ ಸಂಜೆ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕ ನಾಯಕರು, ಕೆಸಿಎಫ್ ಒಮಾನ್ ಹಾಗೂ KCF ಅಂತರಾಷ್ಟ್ರೀಯ ನಾಯಕರು ಹಾಗೂ ವಿವಿಧ ರಾಷ್ಟ್ರಗಳ ಕೆಸಿಎಫ್ ರಾಷ್ಟ್ರೀಯ ನಾಯಕರುಗಳು, SSF – SYS ನಾಯಕರುಗಳು ಊರಮಹನೀಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.