ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):ದೌರ್ಜನ್ಯದಲ್ಲಿ ನೊಂದ ಸಂತ್ರಸ್ತರು ಸಕಾರ್ರದ ಪರಿಹಾರದ ನಿಧಿಯನ್ನು ಪೋಲು ಮಾಡದೆ ಮಕ್ಕಳ ಹೆಸರಿಗೆ ಡಿಪಾಜಿಟ್ ಮಾಡುವ ಮೂಲಕ ಉತ್ತಮ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯ ದೊರಕಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ದೌರ್ಜನ್ಯದಲ್ಲಿ ನೊಂದ ಐವರು ಸಂತ್ರಸ್ತರಿಗೆ 12.87 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಿ ಮಾತನಾಡಿ, ಸರ್ಕಾರದ ಪರಿಹಾರ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡದೆ ಮಕ್ಕಳ ಶಿಕ್ಷಣಕ್ಕೆ ಬಳಸುವ ಮೂಲಕ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ನೀಡಬೇಕೆಂದು ಹೇಳಿದರು.
ಸಂತ್ರಸ್ತರಿಗೆ ಅನ್ಯಾಯ ಆದಾಗ ದೌರ್ಜನ್ಯ ಮಾಡಿದವರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಕಳುಹಿಸಲು ಪಟ್ಟ ಶ್ರಮ ಇದೀಗ ಸಾರ್ಥಕವಾಗಿದ್ದು ಪಲಾನುಭವಿಗಳು ಸರ್ಕಾರದ ಪರಿಹಾರ ನಿಧಿಯನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಜೀವನ ಸಾಗಿಸಬೇಕಿದ್ದು ಕಾನೂನು ಹೋರಾಟಕ್ಕೆ ಸಹಕಾರ ನೀಡುವ ಮೂಲಕ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ದೌರ್ಜನ್ಯದಲ್ಲಿ ನೊಂದ ಬಂಗಾರಪೇಟೆಯ ತನಿಮಡುಗು ಗ್ರಾಮದ ಭವಾನಿಗೆ 4.12 ಲಕ್ಷ ರೂ, ಮಾಲೂರು ತಾಲ್ಲೂಕಿನ ಚಂಬೆ ಗ್ರಾಮದ ನಾರಾಯಣಪ್ಪಗೆ 4.12 ಲಕ್ಷ ರೂ, ಬಂಗಾರಪೇಟೆಯ ಬೋಡಗುರ್ಕಿ ಗ್ರಾಮದ ಮುನಿವೆಂಕಟಪ್ಪಗೆ 4.12 ಲಕ್ಷ ರೂ, ಕೋಲಾರದ ಈಚಲದಿನ್ನೂರು ಗ್ರಾಮದ ನಾಗರಾಜನಿಗೆ 25 ಸಾವಿರ ರೂ ಮತ್ತು ರಾಮಸಂದ್ರದ ಸುಕನ್ಯ ಅವರಿಗೆ 25 ಸಾವಿರ ರೂ. ಪರಿಹಾರ ನಿಧಿ ಚೆಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಐದು ಸಂತ್ರಸ್ತರಿಗೆ ಪರಿಹಾರ ಧನ ಒಟ್ಟು ರೂ.12,87,500/-ಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರ ಜಂಟಿ ಖಾತೆಯಿಂದ ಸಂತ್ರಸ್ಥರಿಗೆ ಉಳಿತಾಯ ಖಾತೆಗೆ ನಗದು ಜಮಾ ಮಾಡಲಾಗಿದೆ ಎಂದು ಕೋಲಾರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.