ಕೋಝಿಕ್ಕೋಡ್(ವಿಶ್ವಕನ್ನಡಿಗ ನ್ಯೂಸ್): ಏಕರೂಪ ನಾಗರಿಕ ಸಂಹಿತೆ ವಿರುದ್ಧ ಮುಸ್ಲಿಂ ಸಮನ್ವಯ ಸಮಿತಿ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಸಿಪಿಎಂ ಭಾಗವಹಿಸಲಿದೆ. ಸಿಪಿಎಂ ಪ್ರತಿನಿಧಿಯಾಗಿ ಕೆ.ಟಿ.ಕುಂಞಿಕಣ್ಣನ್ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಪಿ.ಮೋಹನನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಸ್ಲಿಂ ಸಮನ್ವಯ ಸಮಿತಿ ಆಯೋಜಿಸಿರುವ ವಿಚಾರ ಸಂಕಿರಣ ಇದೇ 26ರಂದು ನಡೆಯಲಿದೆ.
ವಿಚಾರ ಸಂಕಿರಣದಲ್ಲಿ ಜಮಾತೆ ಇಸ್ಲಾಮಿ ಇರುವುದು ಈ ಸಂದರ್ಭದಲ್ಲಿ ಪ್ರಸ್ತುತವಲ್ಲ, ಮುಸ್ಲಿಂ ಲೀಗ್ನಿಂದ ವಿಚಾರ ಸಂಕಿರಣಕ್ಕೆ ಆಹ್ವಾನಿಸಿದರೂ ಭಾಗವಹಿಸುವುದಾಗಿ ಸಿಪಿಎಂ ಜಿಲ್ಲಾ ನಾಯಕತ್ವ ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.