ದುಬೈ(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ದುಬೈ ನೋರ್ತ್ ಝೋನ್ ಗ್ರಾಂಡ್ ಮೀಲಾದ್ ಕಾರ್ಯಕ್ರಮ ಪ್ರಯುಕ್ತ ಸ್ವಾಗತ ಸಮಿತಿ ರಚನಾ ಸಭೆ ದುಬೈ ತಲಶ್ಯೆರಿ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಇಬ್ರಾಹಿಂ ಮದನಿ ಉಸ್ತಾದರು ದುವಾಶೀರ್ವಚನಗೈದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಉಸ್ತಾದ್ ಜಲೀಲ್ ನಿಝಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಉಸ್ತಾದ್ ಇಬ್ರಾಹಿಂ ಸಖಾಫಿ ಕೆದುಂಬಾಡಿ ವಿಷಯ ಮಂಡಿಸಿದರು.
ಸಭೆಯಲ್ಲಿ ಸೆಯ್ಯಿದ್ ತ್ವಾಹ ತಂಗಳ್ ಮತ್ತು ಸೆಯ್ಯಿದ್ ಸುಹೈಲ್ ತಂಗಳ್ ಘಣ್ಯ ಅತಿಥಿಯಾಗಿ ಭಾಗವಹಿಸಿದ್ದರು
ನಂತರ ಗ್ರಾಂಡ್ ಮೀಲಾದ್ ಕಾರ್ಯಕ್ರಮಕ್ಕೆ 40 ಸದಸ್ಯರ ಸ್ವಾಗತ ಸಮಿತಿ ರಚನೆ ಮಾಡಲಾಯಿತು. ಚೇರ್ ಮ್ಯಾನ್ ಉಸ್ತಾದ್ ಅಬ್ದುಲ್ ಜಲೀಲ್ ನಿಝಾಮಿ, ವರ್ಕಿಂಗ್ ಚೇರ್ ಮ್ಯಾನ್ ಕಲಂದರ್ ಕಬಕ, ಜನರಲ್ ಕನ್ವಿನರ್ ರಾಶಿದ್ ಕುವೆಂಜ, ಕನ್ವೀನರ್ ಅಶ್ರಫ್ ಮದನಿ ಕುಪಟ್ಟಿ, ಕೋಶಾಧಿಕಾರಿ ಖಾದರ್ ಸಾಲೆತ್ತೂರ್, ಪ್ರೋಗ್ರಾಮ್ ಕೋಡಿನೇಟರ್ ರಿಯಾಝ್ ಕೊಂಡಂಗೇರಿ ಯವರನ್ನು ಆಯ್ಕೆ ಮಾಡಲಾಯ್ತು
ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಸ್ವಾಗತ ಸಮೀತಿ ಜನರಲ್ ಕನ್ವಿನರ್ ರಾಶಿದ್ ಕುವೆಂಜೆ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.