ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೊಟ್ಟ ಮಾತಿನಂತೆ ಸರಕಾರ ನಡೆಯುತ್ತಿದ್ದು ಶ್ಲಾಘನೀಯ. ಚುನಾವಣಾ ಪೂರ್ವ ಗ್ಯಾರಂಟಿಗಳು ಇದೀಗ ಜಾರಿಯಾಗಿದ್ದು ಜನ ಸಾಮಾನ್ಯರಿಗೆ ಅದು ಬಹುದೊಡ್ಡ ಉಪಕಾರಿಯೇ ಸರಿ. ಆದರೂ ಬಹಳಷ್ಟು ಮಂದಿ ಅವುಗಳನ್ನು ಪಡಕೊಳ್ಳುವಲ್ಲಿ ವಿಫಲರಾಗುವುದು ಖೇದಕರ. ಈ ಬ್ರಹತ್ ಯೋಜನೆ ರಾಜ್ಯಾದ್ಯಂತ ಸರ್ವರಿಗೂ ತಲುಪುವುದು ಅಷ್ಟು ಸುಲಭವಲ್ಲ ಹಂತ ಹಂತವಾಗಿ ಅದು ತಲುಪಬಹುದೆಂಬ ಆಶಾಭಾವನೆ ಜನರಲ್ಲಿದೆ.
ಅದರ ಹೊರತಾಗಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದಾಗಿ ಕೈ ತಪ್ಪುವುದು ಸರಿಯೆನಿಸುವುದಿಲ್ಲ ಅದನ್ನು ಸರಿಪಡಿಸಿ ತಲುಪಿಸುವ ವ್ಯವಸ್ಥೆ ಬೇಕಾಗಿದೆ ಇದು ಜನಾಗ್ರಹ. ಇದೀಗ ಅನ್ನಭಾಗ್ಯದ ಹಣ ಕೆಲವರಿಗೆ ಖಾತೆಗೆ ಜಮೆಯಾಗಿದೆ ಇನ್ನೂ ಕೆಲವರು ಅಲ್ಲಿ ಇಲ್ಲಿ ತಿರುಗಾಡುತ್ತಿದ್ದಾರೆ. ನಿಮ್ಮ ಖಾತೆ ಸರಿಯಾಗಿಲ್ಲ ಎಂಬ ಮಾಹಿತಿ ದೊರೆಯುತ್ತಿದ್ದು ಅದನ್ನು ಬ್ಯಾಂಕಲ್ಲಿ ವಿಚಾರಿಸುವಾಗ ಇಲ್ಲಿ ಎಲ್ಲವೂ ಸರಿಯಾಗಿದೆ ಎನ್ನುತ್ತಾರೆ. ಹತ್ತಾರು ಬಾರಿ ತೆರಳಿ ಗಂಟೆಗಟ್ಟಲೆ ಕಾದು ನಿಂತ ವೃದ್ಧರು, ರೋಗಿಗಳು ಕಂಗಾಲಾಗುತ್ತಿದ್ದಾರೆ.ಬ್ಯಾಂಕ್ ಸಿಬ್ಬಂದಿಗಳಿಗೂ ಪೂರ್ಣ ಮಾಹಿತಿ ಇಲ್ಲ ಎಂದರೆ ತಪ್ಪಾಗಲಾರದು. ಆಧಾರ್ ಲಿಂಕ್,ಅಥವಾ ಆಧಾರ್ ಸಂಬಂಧಿತ ಸಮಸ್ಯೆಯೇ ಬಹುತೇಕ ಜನರದ್ದು.ಇದನ್ನು ನಿಭಾಯಿಸಲು ಹೆಚ್ಚಿನ ಕೇಂದ್ರಗಳು ,ಹಾಗೂ ಸಹಾಯಕರು ಅನಿವಾರ್ಯ.
ಜನಪ್ರತಿನಿಧಿಗಳು ಚುನಾವಣಾ ಪೂರ್ವ ದಲ್ಲಿ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ತಲುಪಿಸಿದ ಹುಮ್ಮಸ್ಸು ಇದೀಗ ಅದರ ಉಪಯೋಗ ಜನರಿಗೆ ತಲುಪಿಸುವಲ್ಲಿ ತೋರಬೇಕು ಅವುಗಳ ಸಂಪೂರ್ಣ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರತಿಜ್ಞಾ ಬದ್ಧರಾಗಬೇಕೆಂದು ಜನಪರ ಕಾಳಜಿ ಯೊಂದಿಗೆ ಆಗ್ರಹ ಪಡಿಸುತ್ತೇನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.