ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್ ):ಜೆಡಿಎಸ್ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ || ಎಂ . ಗಾಯಿತ್ರಿ ಮುತ್ತಪ್ಪ ರವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಸಾರ್ವಜನಿಕ ಸೇವೆಗಾಗಿ ಭಗವಂತ ಇನ್ನಷ್ಟು ಶಕ್ತಿ ಮತ್ತು ಆರೋಗ್ಯ ನೀಡಲಿ ಎಂದು ಜೆಡಿಎಸ್ನ ಯುವ ಮುಖಂಡ ಅಂಬೇಡ್ಕರ್ ಪಾಳ್ಯ ಸಿ . ರವಿ ತಿಳಿಸಿದರು. ಪಟ್ಟಣದ ಪ್ರವಾಸ ಮಂದಿರದಲ್ಲಿ ಡಾ || ಎಂ . ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಏರ್ಪಡಿಸಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಸಿ. ರವಿ ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ತಮ್ಮ ಕೈಯಲಾದಷ್ಟು ಬಡವರಿಗೆ , ಮಹಿಳೆಯರಿಗೆ ಸಹಾಯವನ್ನು ಮಾಡಿ ಕ್ಷೇತ್ರಾದ್ಯಾಂತ ತಮ್ಮ ಹೆಸರನ್ನು ಜನರ ಮನದಾಳದಲ್ಲಿ ಸಂಪಾದಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಉತ್ತಮವಾಗಲಿ ಭಗವಂತ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು . ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಡಾ || ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಬೃಹತ್ ಹಾರ ಹಾಕಿ ಕೇಕ್ನ್ನು ಕತ್ತರಿಸಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಅಚರಿಸಿದರು. ಹುಟ್ಟು ಹಬ್ಬಕ್ಕೆ ಬಂದಂತಹ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.