ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪಡಿತರ ಅಕ್ಕಿ ಕೇಳಿದರೆ ಜನರಿಗೆ ಸತ್ತು ಹೋಗು ಎಂದು ಹೇಳುವ ಮೂಲಕ ಬೇಜವಾಬ್ದಾರಿ ಹೇಳಿಕೆ ನೀಡಿರುವ ಅನಾಗರಿಕ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈ ಬಿಡಬೇಕು ಮತ್ತು ಅಮಾಯಕ ಜನರ ಬಗ್ಗೆ ಹಗುರವಾಗಿ ಪರಿಗಣಿಸಿದ್ದಕ್ಕೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ರಾಜ್ಯದಲ್ಲಿ ಕೊರೋನಾ ತಡೆಯಲು ಲಾಕ್ ಡೌನ್ ಮಾಡಿದ್ದು, ಈ ಸಮಯದಲ್ಲಿ ಪಡಿತರದ ಮೂಲಕ 5 ಕೆಜಿ ಅಕ್ಕಿಯನ್ನು 2 ಕೆಜಿಗೆ ಇಳಿಸಿರುವ ಬಗ್ಗೆ, ಆಹಾರ ಮತ್ತು ನಾಗರೀಕ ಸಚಿವರಿಗೆ ಪೋನ್ ಮಾಡಿ, ಯಾಕೆ ಅಕ್ಕಿ ಕಡಿತ ಮಾಡಿದ್ದೀರಿ, ಈಗ ರಾಜ್ಯದಲ್ಲಿ ಲಾಕ್ ಡೌನ್ ಮಾಡಿದೆ ಈ ರೀತಿ ಅಕ್ಕಿ ಕಡಿತ ಮಾಡಿದರೆ ನಾವು ಸಾಯಬೇಕೆ ಎಂದು ರೈತ ಕೇಳಿದಾಗ, ಸಾಯಿ ಎಂದು ಸಚಿವರು ಹೇಳಿರುವುದು ರಾಜ್ಯದ ಬಡ ಜನರ ಬಗ್ಗೆ ಸಚಿವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದಿದ್ದಾರೆ.
ಇನ್ನೂ ಮುಂದುವರೆದು ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವರು ಜನ ಕೇಳುವ ಪ್ರಶ್ನೆಗಳಿಗೆ ಸೌಜನ್ಯದಿಂದ ವರ್ತಿಸಿ ಸಮಾಧಾನದಿಂದ ಮಾತನಾಡುವುದನ್ನು ಬಿಟ್ಟು ಸಾಯಿ ಎಂದು ಹೇಳಿರುವುದು ಕಂಡರೇ ಜನರ ಬಗ್ಗೆ ಈ ಸಚಿವರಿಗೆ ಇರುವ ಅಭಿಪ್ರಾಯವನ್ನು ತಿಳಿಸುತ್ತದೆ.
ಇಂತಹ ದುರಂಕಾರಿ, ಜನ ವಿರೋಧಿ, ಜವಾಬ್ದಾರಿ ಇಲ್ಲದ ಆಹಾರ ಮತ್ತು ನಾಗರೀಕ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.