ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರಿನಿಂದ ಮೂಡಬಿದ್ರೆಗೆ ಬರುತ್ತಿದ್ದ ಜಯರಾಜ್ ಎಕ್ಸ್ಪ್ರೆಸ್ ಬಸ್ ಬಲ್ಲಿ ರಝಿಯಾ ಎಂಬ ಮಹಿಳೆಯ ಪರ್ಸ್ ಕೈಯಿಂದ ಜಾರಿ ಬಿದ್ದಿತ್ತು. ಪರ್ಸ್ ನಲ್ಲಿ ರುಪಾಯಿ 6000 ಹಣ, ATM, ಮತ್ತು ಕೆಲವು ಅಗತ್ಯ ವಸ್ತುಗಳು ಇತ್ತು. ಮಹಿಳೆ ಗಂಜಿಮಠದಲ್ಲಿ ಇಳಿದಿದ್ದು ಬಸ್ ಹೋಗಿ ಸುಮಾರು 20 ನಿಮಿಷಗಳ ನಂತರ ಈಕೆಗೆ ಪರ್ಸ್ ಇಲ್ಲದೆ ಇರುವ ಬಗ್ಗೆ ತಿಳಿಯಿತು.
ತಕ್ಷಣ ತನ್ನ ಸಂಬಂಧಿ ಅತಾವುಲ್ಲಾ ಪಟ್ನಾ ಮೂಡಬಿದ್ರೆ ವಕೀಲರಾದ ಎನ್.ಜಿ ಇರ್ಷಾದ್ ಅವರನ್ನು ಸಂಪರ್ಕ ಮಾಡಿದರು. ಆದರೆ ತಕ್ಷಣ ಬಸ್ ನಿಲ್ದಾಣಕ್ಕೆ ಹೋಗಲು ಅಸಾಧ್ಯವಾದ ಕಾರಣ ಇರ್ಷಾದ್ ಅವರು ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ಇರುವ ಮುಬೈಲ್ ಶಾಪ್ ಒಂದರ ಮಾಲಿಕ ಶಫೀಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆ ಸಮಯ ಬಸ್ ಮೂಡಬಿದ್ರೆಗೆ ಬಂದು ಕಾರ್ಕಳಕ್ಕೆ ಹೋಗಿ ಆಗಿತ್ತು. ನಂತರ ಶಫೀಕ್ ಅವರು ಜಯರಾಜ್ ಬಸ್ ಕಂಡಕ್ಟರ್ ಸುಂದರ ಪೊಳಲಿ ಅವರ ಮುಬೈಲ್ ನಂಬರ್ ಪಡೆದು ವಕೀಲರಾದ ಇರ್ಷಾದ್ ಅವರಿಗೆ ನೀಡಿದ್ದು, ಇರ್ಷಾದ್ ಅವರು ಸುಂದರ ಪೊಳಲಿ ಅವರಿಗೆ ಕರೆ ಮಾಡಿ ಬಸ್ ನಲ್ಲಿ ಯಾವುದಾದರೂ ಪರ್ಸ್ ದೊರಕಿದೆಯೇ ಎಂಬುದನ್ನು ವಿಚಾರಿಸಿದರು. ತಕ್ಷಣ ಬಸ್ ಕಂಡಕ್ಟರ್ ಸುಂದರ ಪೊಳಲಿ ಅವರು ಪರ್ಸ್ ಒಂದು ಸಿಕ್ಕಿರುವುದಾಗಿ ಮತ್ತು ಅದನ್ನು ತೆಗೆದು ಇಟ್ಟಿರುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಬಸ್ ನಲ್ಲಿ ಯಾವುದೇ ಪರ್ಸ್ ಸಿಗಲಿಲ್ಲ ಎಂದಿದ್ದರೂ ಪರ್ಸ್ ಕಳಕೊಂಡ ಮಹಿಳೆ ಪರ್ಸ್ ಆಸೆ ಬಿಡಬೇಕಿತ್ತು. ಯಾಕೆಂದರೆ ಆಕೆಗೆ ಪರ್ಸ್ ಎಲ್ಲಿ ಬಿದ್ದಿದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಸಂಧರ್ಭದಲ್ಲಿ ಸುಳ್ಳು ಹೇಳದೆ ಪರ್ಸ್ ಅನ್ನು ತಮ್ಮ ಬಸ್ ಮಂಗಳೂರಿಗೆ ಹಿಂತಿರುಗುವಾಗ ಗಂಜಿಮಠ ಬಳಿ ವಾರಸುದಾರರಿಗೆ ಮರಳಿಸಿ ಸುಂದರ ಪೊಳಲಿ ಅವರು ಮಾನವೀಯತೆ ಮೆರೆದರು.
ಎಷ್ಟೊ ಮಂದಿ ಲಾಕ್-ಡೌನ್ ಸಂಧರ್ಭದಲ್ಲಿ ಹಣ ಸಿಕ್ಕರೆ ಸಾಕು ಎಂದು ಕಾಯುತ್ತಿರುವಾಗ, ಸುಂದರ ಪೊಳಲಿ ಯಂತಹ ಕಂಡಕ್ಟರ್ ಅವರು ಈ ಸಮಾಜಕ್ಕೆ ನೈಜ ಮಾನವೀಯತೆಯ ಪಾಠವನ್ನು ಮತ್ತು ಸೌಹಾರ್ದತೆಯನ್ನು ತೋರಿಸಿಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.