ಕುವೈತ್(ವಿಶ್ವಕನ್ನಡಿಗ ನ್ಯೂಸ್): ಫಹಾದ್ ಮಂಗಳೂರು ಅವರು ಕುವೈಟ್ ನಲ್ಲಿ ಮೃತರಾಗಿದ್ದು ಕೆಸಿಎಫ್ ಕುವೈತ್ ನೇತೃತ್ವದಲ್ಲಿ ದಫನ್ ಕಾರ್ಯ ನಡೆಸಲಾಯಿತು.
ತಲ್ಕೀ ನ್ ಹಾಗೂ ದುವಾ ಪಾರಾಯಣವು KCF ಕುವೈಟ್ ಉಲಮಾ ನಾಯಕರ ಸಲಹೆಯೊಂದಿಗೆ ಕುವೈತ್ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಂದಾವರ ಅವರು ನೆರವೇರಿಸಿದರು.
KCF ರಾಷ್ಟ್ರೀಯ ಸಮಿತಿಯ ಸಂಘಟನ ಕಾರ್ಯದರ್ಶಿ ಜನಾಬ್ ಸಮೀರ್ ಇಂಜಿನಿಯರ್,ಹಾಗೂ ಫರ್ವನಿಯ ಸೆಕ್ಟರ್ ನ ಜನಾಬ್ ಇಕ್ಬಾಲ್ ಎಡ ಪದವು ಸಾತ್ ಕೊಟ್ಟು ಸಹಕರಿಸಿದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮೃತ ಮರ್ಹ್ಹೂಮ್ ಫಹಾದ್ ಅವರಿಗೆ ಪತ್ನಿ ಹಾಗೂ ಒಂದು ಹೆಣ್ಣು ಮಗು ಒಂದು ಗಂಡು ಮಗುವನ್ನು ಆಗಲಿದ್ದು ಹಾಗೂ ಅಪಾರ ಬಂದು ಮಿತ್ರರನ್ನು ಹೊಂದ್ದಿದ್ದರು. *ಮರ್ಹ್ಹೂಮ್ ಫಹಾದ್ ಅವರ ಹೆಸರಿನಲ್ಲಿ ತಹ್ಲೀಲ್,ಖುರ್-ಆನ್ ಪಾರಾಯಾಣ ಮಾಡಬೇಕಾಗಿ ಮತ್ತು ಮಯ್ಯತ್ ನಮಾಜ್ ನಿರ್ವಹಿಸಬೇಕಾಗಿ ಕುವೈತ್ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಯಾಕೂಬ್ ಕಾರ್ಕಳ ಈ ಮೂಲಕ ವಿನಂತಿಸಿದ್ದಾರೆ.
ಕೆ.ಸಿ.ಎಫ್ ಕುವೈಟ್ ರಾಷ್ಟ್ರೀಯ ಸಾಂತ್ವಾನ ವಿಭಾಗ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.