(www.vknews.com) : ಅಮ್ಮೆಂಬಳ ಹೆಲ್ಪ್ ಲೈನ್ ಇದರ ಎರಡನೇ ವಾರ್ಷಿಕ ಮಹಾಸಭೆಯು ಅಮ್ಮೆಂಬಳದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಲ್ಪ್ ಲೈನ್ ಇದರ ಅಧ್ಯಕ್ಷರಾದ ಉಬೈದ್ ಬಿ ಎಚ್ ಇವರು ವಹಿಸಿದ್ದರು .. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಉಬೈದ್ ಬಿ ಎಚ್ ಇವರು ಸಂಘಟನೆಯು ಎರಡು ವರ್ಷದಲ್ಲಿ ಮಾಡಿದಂತಹ ಸಮಾಜ ಸೇವೆ ಮತ್ತು ಧನಸಹಾಯದ ವಿವರಣೆಯನ್ನು ನೀಡಿದರು.
ಸಂಘಟನೆಯು ಕಳೆದ ಎರಡು ವರ್ಷದಲ್ಲಿ ಸುಮಾರು ಹತ್ತು ಲಕ್ಷ ಎಪ್ಪತ್ತೊಂಬತ್ತು ಸಾವಿರ ರೂಪಾಯಿಗಳ ಧನಸಹಾಯವನ್ನು ಅಮ್ಮೆಂಬಳ ಜಮಾತಿಗೆ ಒಳಪಟ್ಟ ಬಡವರ ಮದುವೆಗೆ , ಕೊರೋನಾ ಸಮಯದಲ್ಲಿ ಕಿಟ್ , ರಮಲಾನ್ ಕಿಟ್ , ರೋಗಿಗಳಿಗೆ ಧನಸಹಾಯ , ಇನ್ನಿತರ ಹಲವಾರು ಸಮಾಜ ಸೇವೆ ಅಮ್ಮೆಂಬಳ ಹೆಲ್ಪ್ ಲೈನ್ ಮುಖಾಂತರ ನಡೆದಿರುತ್ತದೆ.
ಅಮ್ಮೆಂಬಳ ಹೆಲ್ಪ್ ಲೈನ್ ಇದರ 2021_2022 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಉಬೈದ್ ಬಿ ಎಚ್ ಆಯ್ಕೆಯಾದರು.
ಅಧ್ಯಕ್ಷರು :- ಉಬೈದ್ ಬಿ ಎಚ್
ಉಪಾಧ್ಯಕ್ಷರು :- ಅಬ್ದುಲ್ ಖಾದರ್ (ಪುತ್ತ) & ಅಶ್ರಫ್ ಬಿ
ಪ್ರ.ಕಾರ್ಯದರ್ಶಿ :- ಫರ್ವೀಝ್
ಜೊ.ಕಾರ್ಯದರ್ಶಿ :- ಫಾರೂಕ್ ಕೋಟೆ & ಮನ್ಸೂರ್
ಸಂಘಟನಾ ಕಾರ್ಯದರ್ಶಿ :- ರಿಝ್ವಾನ್ ಯು.ಕೆ
ಮಾಧ್ಯಮ ಕಾರ್ಯದರ್ಶಿ :- ಜವಾದ್
ಕೋಶಾಧಿಕಾರಿ :- ಲತೀಫ್.ಟಿ
ಕಾರ್ಯಕಾರಿ ಸಮಿತಿ ಸದಸ್ಯರು : ರಿಯಾಝ್ ಟಿ, ಶಬೀರ್ ಕೋಟೆ, ನಬೀಲ್, ನಿಝಾಂ, ಆರಿಫ್ ಯು.ಕೆ, ಇಕ್ಬಾಲ್ ಜಿ ಕಾರ್ಯಕ್ರಮದಲ್ಲಿ ಜವಾದ್ ಅಮ್ಮೆಂಬಳ ಸ್ವಾಗತಿಸಿ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.