ಚಿಕ್ಕಬಳ್ಳಾಪುರ(ವಿಶ್ವಕನ್ನಡಿಗ ನ್ಯೂಸ್): ಕೊರೋನಾ ಸೊಂಕನ್ನು ನಿಯಂತ್ರಣದಲ್ಲಿಡಲು ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಇದರಿಂದ ಯಾರಿಗೆ ಕಷ್ಟವಾಗಿದೆಯೋ ಗೊತ್ತಿಲ್ಲ, ಆದರೆ ಮದ್ಯಪ್ರಿಯರಿಗೆ ಮಾತ್ರ ತುಂಬಾ ಕಷ್ಟವಾಗಿದೆ. ಆದರೆ ಸರ್ಕಾರ ಮಾತ್ರ ಮದ್ಯದ ಅಂಗಡಿ ತೆರೆಯಲು ಅನುಮತಿ ಕೊಡಲಿಲ್ಲ. ಇದರಿಂದ ಜಿಲ್ಲೆಯಲ್ಲಿ ಇಂದು ಒಂದೇ ದಿನ 2 ಮದ್ಯದ ಅಂಗಡಿಗಳಲ್ಲಿ ಕಳ್ಳತನವಾಗಿದೆ.
ಚಿಕ್ಕಬಳ್ಳಾಪುರ ನಗರದ ಕ್ಯಾಂಪಾಸ್ ಬಳಿಯಿರುವ ಗೋಲ್ಡನ್ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಹಾಗೂ ನಿಸರ್ಗ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಕಳ್ಳತನವಾಗಿದ್ದು, ಗೋಲ್ಡನ್ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಬೆಳಗಿನ ಜಾವ ಸುಮಾರು 4.00 ಘಂಟೆ ಸಮಯದಲ್ಲಿ ಅಂಗಡಿಯ ಹೊರಗಡೆಯಿದ್ದ ಸಿಸಿ ಕ್ಯಾಮೆರಾವನ್ನು ಕಿತ್ತು ಹಾಕಿ ಹಿಂದುಗಡೆ ಗೊಡೆಯನ್ನು ಕೊರೆದು ಅಂಗಡಿಯ ಒಳಗಡೆ ಹೋಗಿ ಕಳ್ಳತನ ಮಾಡಿದ್ದಾರೆ.
ರೆಸ್ಟೊರೆಂಟ್ ನಲ್ಲಿ ಅಡಿಗೆ ಮಾಡುವವರು ಅಂಗಡಿಯ ಮೇಲಿರುವ ರೂಂನಲ್ಲಿ ಮಲಗಿದ್ದರು, ಅವರನ್ನು ಕೂಡಿ ಹಾಕಿ ಅವರ ಬಳಿಯಿರುವ ಮೊಬೈಲ್ ಅನ್ನು ಕಸಿದುಕೊಂಡಿದ್ದಾರೆ. ಆದರೆ ಕೆಲಸಗಾರರು ಬುದ್ಧಿವಂತಿಕೆಯಿಂದ ಒಚಿದು ಮೊಬೈಲ್ಅನ್ನು ತಮ್ಮ ಬಳಿ ಬಚ್ಚಿಟ್ಟುಕೊಂಡು ಬಾರ್ ಮಾಲೀಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಾಲೀಕರು ಪೋಲೀಸರಿಗೆ ಫೋನ್ ಮಾಡಿದಾಗ ಬಾರ್ ತೆರೆಯದಂತೆ ಒಳಗಡೆ ಪ್ರವೇಶ ಮಾಡದಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಘಟನಾ ಸ್ಥಳಕ್ಕೆ ಶ್ವಾನದಳದವರು ಹಾಗೂ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅದೇರೀತಿ ನಿಸರ್ಗ ಬಾರ್ ಅಂಗಡಿಯ ರೋಲಿಂಗ್ ಶೆಟರನ್ನು ಮುರಿದು ಖದೀಮರು ಮದ್ಯವನ್ನು ಕಳ್ಳತನ ಮಾಡಿದ್ದಾರೆ, ಸ್ಥಳಕ್ಕೆ ಪೋಲೀಸರು ಆಗಮಿಸಿ ಪರೀಶೀಲನೆ ನಡೆಸಿದ್ದಾರೆ.
ಒಂದೇ ದಿನ ನಗರದ 2 ಬಾರ್ ಗಳಲ್ಲಿ ಕಳ್ಳತನವಾಗಿದ್ದು, ನಗರದಲ್ಲಿ ಉಳಿದ ಬೇರೆ ಬೇರೆ ಬಾರ್ ಅಂಗಡಿ ಮಾಲೀಕರಿಗೆ ಕಳವಳ ಶುರುವಾಗಿದ್ದು, ಮದ್ಯ ಸಿಗದಿರುವ ಕಾರಣಕ್ಕೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಅಂಗಡಿಯ ಮಾಲೀಕರೇ ಈ ರೀತಿ ಕಳ್ಳತನ ಮಾಡಿಸುತ್ತಿದ್ದಾರೋ ಅಥವಾ ನಿಜವಾಗಿಯೂ ಕಳ್ಳತನವಾಗಿದೆಯೋ ಆರೋಪಿಗಳು ಸಿಗುವವರೆಗೂ ಕಾಯಬೇಕಿದೆ.
ವರದಿ: ವಿ. ಅರ್ಪಿತ್ ಕುಮಾರ್ ವರದಿಗಾರರು, ಚಿಕ್ಕಬಳ್ಳಾಪುರ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.