ಬಹರೈನ್(ವಿಶ್ವಕನ್ನಡಿಗ ನ್ಯೂಸ್): ಕೊರೋನ ಸಂಕಷ್ಟದಲ್ಲಿ ಸಿಲುಕಿದ ಅನಿವಾಸಿ ಕನ್ನಡಿಗರಿಗೆ ಬಹರೈನ್ ಕೆ.ಸಿ.ಎಫ್ ನೆರವಿನ ಹಸ್ತವನ್ನು ಚಾಚಿದೆ. ವಿಟ್ಟಲ್ ಜಮಾಲುದ್ದೀನ್ ನೇತೃತ್ವದ ಬಹರೈನ್ ಕೆ.ಸಿ.ಎಫ್ ಸಮಿತಿ ವಿವಿಧ ಯೋಜನೆಗಳ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿಗಳಿಗೆ ನೆರವನ್ನು ನೀಡಿದೆ.
ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿಗಳು ಸಂಪರ್ಕಿಸಲಿಕ್ಕಾಗಿ ಹೆಲ್ಪ್ ಡೆಸ್ಕ್ಗಳನ್ನು ಪ್ರಾರಂಭಿಸಿದ್ದು ಸಹಾಯವಾಣಿ ನಂಬರಿಗೆ ಬಂದ ಎಲ್ಲಾ ಕರೆಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಜಾತಿ ಮತ ಧರ್ಮ ಭೇದ ಭಾವವಿಲ್ಲದೆ ಲಾಕ್ ಡೌನಿನಲ್ಲಿ ಸಿಲುಕಿ ಕಷ್ಟಪಡುತ್ತಿರುವ ಎಲ್ಲಾ ಅನಿವಾಸಿಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಅನ್ನು ನೀಡಲಾಗಿದೆ.
(ವೀಡಿಯೋ)
ಅದೇ ರೀತಿ ಕೆ.ಸಿ.ಎಫ್ ಸಾಂತ್ವನ ಹಾಗೂ ಸನ್ನದ್ದ ಸೇನೆಯ ಕಾರ್ಯಾಚರಣೆಗಳ ಮೂಲಕ ಕಷ್ಟದಲ್ಲಿ ಇರುವ ಅನಿವಾಸಿ ಕುಟುಂಬಗಳನ್ನು ಗುರುತಿಸಿ ನೂರಾರು ರಂಜಾನ್ ಕಿಟ್ ಗಳನ್ನು ಒದಗಿಸಲಾಗಿದೆ. ಊರಿಗೆ ತೆರಳಿ ಕಷ್ಟದಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ಸಹಾಯಧನವನ್ನು ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.