ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಇಬ್ಬನಿ ಸುಳ್ಯ ಆಯೋಜಿಸುವ ವಾಟ್ಸಪ್ ರಸ ಪ್ರಶ್ನೆ ಸ್ಪರ್ಧೆಯ ಎರಡನೇ ಆವೃತಿಯಲ್ಲಿ ಇಬ್ಬನಿ ಚಾಣಕ್ಯರಾಗಿ ಶರೀಫ್ ಪೆರಾಜೆ ಹೊರಹೊಮ್ಮಿದ್ದಾರೆ. ಪ್ರತೀ ಆದಿತ್ಯವಾರ ರಾತ್ರಿ ನಡೆಯುತ್ತಿದ್ದ ವಾಟ್ಸಪ್ ರಸ ಪ್ರಶ್ನೆಯಲ್ಲಿ ಮಾಹೆಯಾನ ವಿಜೇತರನ್ನು ಆಯ್ಕೆ ಮಾಡಿ ದಿನಾಂಕ 27-04-2020ರಂದು ಫೈನಲ್ ನಡೆಸಲಾಗಿತ್ತು.
ಇಬ್ಬನಿ ಚಾಣಕ್ಯ ರಸ ಪ್ರಶ್ನೆ ಸ್ಪರ್ದೆಯ ಎರಡನೇ ಆವೃತಿಯಲ್ಲಿ ಫೈನಲ್ಗೆ ತೇರ್ಗಡೆ ಪಡೆದವರು ಮಾಹೆಯಾನ ವಿಜೇತ ಫೈನಲ್ ಸ್ಪರ್ಧಿಗಳು ಎಸ್ ಆರ್ ಓಲ್ಡ್ ಗೇಟ್, ಖಾದರ್ ಎಂ.ಎಸ್.ಡಬ್ಲ್ಯೂ, ನಾಸಿರ್ ಸಿ.ಎ, ಹಸೈನಾರ್ ಬಾಳೆಮಕ್ಕಿ, ಸಿದ್ದೀಕ್ ಕಲ್ಲುಗುಂಡಿ,ಉನೈಸ್ ಜಟ್ಟಿಪಳ್ಳ, ಝುಬೈರ್ ಪೈಚಾರ್, ಶರೀಫ್ ಪೆರಾಜೆ, ಜಾಬಿರ್ ಕಲ್ಲುಮುಟ್ಲು, ಹಮೀದ್ ಪೆರಾಜೆ, ರಮೀಝ್ ಪಾಲಡ್ಕ, ಮುನೀರ್ ಶೈನ್, ರಮೀಝ್ ಕೊಕ್ಕಡ.
ಫೈನಲ್ ರಸ ಪ್ರಶ್ನೆ ಅತ್ಯಂತ ಪೈಪೋಟಿಯಿಂದ ನಡೆದಿದ್ದು ಶರೀಫ್ ಪೆರಾಜೆ ಹಾಗೂ ಹಮೀದ್ ಪೆರಾಜೆ ತಲಾ 35 ಅಂಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೆ ಇಬ್ಬರು ಆಯ್ಕೆಯಾದಾರು, ಇವರೀರ್ವರಿಗೂ ಇನ್ನೊಂದು ಸುತ್ತಿನ ರಸ ಪ್ರಶ್ನೆ ನಡೆಸಿದಾಗ 2-4 ಅಂತರಗಳಿಂದ ಶರೀಫ್ ಪೆರಾಜೆ 2019-20ನೇ ಸಾಲಿನ ಇಬ್ಬನಿ ಚಾಣಕ್ಯನಾಗಿ ಹೊರಹೊಮ್ಮಿರುತ್ತಾರೆ.
ದ್ವಿತೀಯ ಸ್ಥಾನವನ್ನು ಹಮೀದ್ ಪೆರಾಜೆ ,ತೃತೀಯ ಸ್ಥಾನವನ್ನು ಹಸೈನಾರ್ ಬಾಳಮಕ್ಕಿ ಮತ್ತು ಚತುರ್ಥ ಸ್ಥಾನವನ್ನು ಉನೈಸ್ ಜಟ್ಟಿಪಳ್ಳ ಪಡೆದಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.