ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಬಂಟ್ವಾಳ ತಾಲೂಕಿನ ಸಜಿಪಮೂನ್ನೂರು ಗ್ರಾಮ ಪಂಚಾಯತಿಗೆ ಒಳಪಟ್ಟಿರುವ ನಂದಾವರ ಹಾಗೂ ಪಾಣೆಮಂಗಳೂರು ಸೇರುವ ಸೇತುವೆಯ ಬಳಿ ಇರುವ ಶ್ರೀ ಶಾರದಾ ಹೈ ಸ್ಕೂಲ್ ಹಾಗೂ ಎಸ್.ಎಲ್.ಎನ್. ಪಿ ವಿದ್ಯಾ ಕೇಂದ್ರದ ಶಾರದಾ ಮೈದಾನದ ಮುಂಭಾಗದಲ್ಲಿ ಕಸ ಎಸೆದು ಅದೇ ಶಾಲೆ ಹೋಗುವ ತಮ್ಮದೇ ಮಕ್ಕಳಿಗೆ ಹಾಗೂ ಸ್ಥಳೀಯ ಜನರಿಗೆ ಮಾರಕ ರೋಗವನ್ನು ಕೈ ಬೀಸಿ ಕರೆಯುವಂತಿರುವ ದ್ರಶ್ಯ.
ಬಂಟ್ವಾಳ ಮುನ್ಸಿಪಾಲಿಟಿಗೆ ಒಳಪಟ್ಟಿರುವ ಪಾಣೆಮಂಗಳೂರು ಬಂಗಳಗುಡ್ಡೆ ಹಾಗೂ ನಂದಾವರ ಪರಿಸರದ ಫ್ಲ್ಯಾಟ್ಗಳಲ್ಲಿರುವ ಅತ್ಯಧಿಕ ಜನರು ತಂದೆಸೆಯುವ ಕಸವಾಗಿದೆ ಇದು. ಇದೇ ಸೇತುವೆ ಕೆಳಗಡೆ ಸಜೀಪಮುನ್ನೂರು ಗ್ರಾಮ ಪಂಚಾಯತಿ ನಂದವರಕ್ಕೆ ಹಾಗೂ ಈ ಎರಡು ಶಾಲೆಗಳಿಗೆ ನೀರನ್ನು ಪೂರೈಕೆ ಮಾಡುವ ನೀರಿನ ಟ್ಯಾಂಕ್ ಬಹಳ ಹತ್ತಿರದಲ್ಲಿದೆ. ಮಳೆಗಾಲ ಆರಂಭವಾಗಿದ್ದು ಅದರಿಂದ ಕೊಚ್ಚೆನೀರು ಹರಿದು ಟ್ಯಾಂಕಿನ ನೀರಿನಲ್ಲಿ ಸೇರಿ ಆ ನೀರಿನಿಂದ ಭಯಾನಕ ಸಂಕ್ರಮಿಕ ಭಯಾನಕ ರೋಗಗಳು ಹರಡಬಹುದೆ ಎಂಬುದು ಮೇಲುನೋಟಕ್ಕೆ ಎದ್ದು ಕಾಣುತ್ತಿದೆ.
ಈ ನೀರನ್ನು ಗ್ರಾಮದ ಜನರು ಹಾಗೂ ನಂದಾವರದ ಎರಡು ಸರಕಾರಿ ಶಾಲೆ ಹೋಗೋ ಮಕ್ಕಳು, ಶ್ರೀ ಶಾರದಾ ಹೈಸ್ಕೂಲ್ ಹಾಗೂ ಎಸ್ಎಲ್ಎನ್ ಪಿ ಶಾಲೆಯ ಮಕ್ಕಳು ಮತ್ತು ನಂದಾವರ ಪರಿಸರದ ಅತ್ಯಧಿಕ ಜನರು ಬಳಸುವುದಲ್ಲದೆ ಜಾನುವಾರುಗಳಿಗೂ ಉಪಯೋಗಿಸುತ್ತಾರೆ.
ಈ ಮೂಲಕ ವಿನಂತಿಸುವುದೇನೆಂದರೆ ಈಗಾಗಲೇ ಕಸದಿಂದ ಗಬ್ಬು ವಾಸನೆ ಎದ್ದು ಸೊಳ್ಳೆ, ಹುಳ ಕೀಟ ಹೊರ ಬರುತ್ತಿದ್ದು ನಾಯಿ ಕಸವನ್ನು ರಸ್ತೆಗೆ ಎಳೆದು ತರುತ್ತಿದೆ, ಆದ್ದರಿಂದ ಸಜಿಪಮೂನ್ನೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭೆ ನಗರಸಭೆ ಮತ್ತು ಆರೋಗ್ಯ ಇಲಾಖೆ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಹಾಗೂ ಜನಸಾಮಾನ್ಯರಿಗೆ ಕಸವಿಲೇವಾರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕಾಗಿದೆ.
…. ಸ್ಥಳೀಯ ನಾಗರಿಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.