(www.vknews.com) : ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಾಮೂಹಿಕ ನಮಾಜ್ ನಿರ್ಬಂಧಿಸಿದ್ದ ಸರಕಾರವು ಜೂನ್ ಎಂಟರಿಂದ ನಮಾಜಿಗೆ ಅನುಮತಿ ನೀಡಿದ್ದು, ಅದರಂತೆ ಮಾಡನ್ನೂರು ಮಸೀದಿಯಲ್ಲಿ ಜೂನ್ 8ರ ಮುಂಜಾನೆಯಿಂದ ಮೊಹಲ್ಲಾ ನಿವಾಸಿಗಳಿಗೆ ನಿಬಂಧನೆಗಳೊಂದಿಗೆ ದೈನಂದಿನ ಸಾಮೂಹಿಕ ನಮಾಜಿ ಗೆ ಅವಕಾಶ ನೀಡಲಾಯಿತು.
ಅದೇ ರೀತಿ ಜೂನ್ 12 ರಂದು ಜುಮಾ ನಮಾಝನ್ನು ರಾಜ್ಯ ಸರಕಾರ, ಆರೋಗ್ಯ ಇಲಾಖೆ, ವಕ್ಫ್ ಮಂಡಳಿ, ಉಲಮಾ ಪ್ರಮುಖರು ಮತ್ತು ಖಾಝಿಗಳ ಮಾರ್ಗಸೂಚಿಗಳನ್ನು ಪಾಲಿಸಿ ನಿರ್ವಹಿಸಲಾಯಿತು.
ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಮತ್ತು ಊರಿನ ಪ್ರಮುಖರೂ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರೂ ಆದ ಅಬ್ದುಲ್ ಅಝೀಝ್ ಬುಶ್ರಾ ರವರ ಮಾರ್ಗದರ್ಶನದಲ್ಲಿ, ಆಡಳಿತ ಸಮಿತಿ ಪದಾಧಿಕಾರಿಗಳು, ಯುವಕ ಮಿತ್ರರು, ಜಮಾತ್ ಬಾಂಧವರು ಸಹಕರಿಸಿದರು. ನಮಾಜ್ ಮಾಡುವವರೆಡೆಯಲ್ಲಿ ಸುರಕ್ಷಿತ ಅಂತರ, ರಿಜಿಸ್ಟ್ರೇಷನ್, ಸ್ಯಾನಿಟೈಸರ್, ಸೋಪಿನ ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಹಾಗೂ ಜಮಾಅತ್ ಸಮಿತಿ ಸೂಚಿಸಿದ ನಿಯಮ ಫಲಕಗಳನ್ನು ಮಸೀದಿಯಲ್ಲಿ ಅಳವಡಿಸಲಾಗಿತ್ತು. ಹಾಗೂ ನಿಯಮಾವಳಿಗಳ ಪ್ರತಿಯನ್ನು ಜಮಾಆತಿನ ಪ್ರತಿ ಮನೆಗಳಿಗೂ ತಲುಪಿಸಲಾಗಿತ್ತು. ಖತೀಬರಾದ ಸಿರಾಜುದ್ದೀನ್ ಫೈಝಿ ಅವರು ಸಂಕ್ಷಿಪ್ತ ಕುತುಬಾ ಪಾರಾಯಣ ಹಾಗೂ ನಮಾಜ್ ಗೆ ನೇತೃತ್ವ ನೀಡಿದರು. ನಿಯಮಾವಳಿಗಳನ್ನು ಪಾಲಿಸಿ ಜುಮ್ಮಾನಿರ್ವಹಣೆಗೆ ಸಹಕರಿಸಿದ ಮೊಹಲ್ಲಾ ನಿವಾಸಿಗಳಿಗೆ ಮಸೀದಿ ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ಅಬ್ದುಲ್ ಅಝೀಝ್ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.