ಪುಣಚ (www.vknews.com) : ಇತ್ತೀಚೆಗೆ ಭಾರತದ ಗಡಿಯಲ್ಲಿ ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ನಮ್ಮ ದೇಶದ ವೀರ ಯೋಧರಿಗೆ ಪ್ರೆಂಡ್ಸ್ ಪುಣಚ ವಾಟ್ಸಫ್ ಗ್ರೂಪಿನ ವತಿಯಿಂದ ಸಂತಾಪ ಸೂಚಿಸಿ ದೀಪ ಹಚ್ಚುವ ಮೂಲಕ ಮೌನ ಪ್ರಾರ್ಥನೆ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್, ಪುಣಚ ಗ್ರಾ.ಪಂ ಅಧ್ಯಕ್ಷರಾದ ಪ್ರತಿಭಾ ಶ್ರೀಧರ್ ಶೆಟ್ಟಿ, ನಿವ್ರತ ಯೋಧ ಕರುಣಾಕರ ಗೌಡ ಸಂಕೇಶ, ರೈತ ಸಂಘದ ಕಾರ್ಯದರ್ಶಿ ರವಿಕಿರಣ್ ಪುಣಚ, ಮಾತನಾಡಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗ್ರಾಮದ ನಾಗರೀಕರು ಪುಣಚ ಪ್ರೆಂಡ್ಸ್ ಗ್ರೂಪಿನ ಸದಸ್ಯರು ಭಾಗವಹಿಸಿದರು. ಈ ಸಂದರ್ಭದಲ್ಲಿ ಪುಣಚ ಪ್ರೆಂಡ್ಸ್ ಗ್ರೂಪಿನ ಅಡ್ಮಿನ್ ಗಳಾದ ರವಿ ಕಾನ, ಶಫೀಕ್ ಎಂ.ಎಸ್,ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.